ಬಳ್ಳಾರಿ : ಕರ್ನಾಟಕ ರಾಜ್ಯದ ಬಗ್ಗೆ ಕೇಂದ್ರ ಸರ್ಕಾರವು ಮೊದಲನಿಂದಲೂ ಮಲತಾಯಿ ಧೋರಣೆ ತೋರುತ್ತಿದ್ದು, ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಆರ್ಥಿಕ ದೌರ್ಜನ್ಯವೆಸುಗುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆ ಹಣವನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಹಂಚಿಕೆ ಮಾಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ, ನಮ್ಮ ರಾಜ್ಯದಿಂದ ಸುಮಾರು ನಾಲ್ಕು ಲಕ್ಷ ಕೋಟಿ ತೆರಿಗೆ ಹಣವನ್ನು ಪಡೆದುಕೊಂಡು ಕೇವಲ ಐವತ್ತು ಸಾವಿರ ಕೋಟಿ ರೂಪಾಯಿಗಳನ್ನು ಮಾತ್ರ ನೀಡುತ್ತಿದೆ, ಇದು ಭಾರತೀಯ ಜನತಾ ಪಕ್ಷದ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿದ ದ್ರೋಹವೇ ಸರಿ, ಅತೀ ಶೀಘ್ರವೇ ಕರ್ನಾಟಕ ರಾಜ್ಯಕ್ಕೆ ಸೇರಬೇಕಾದ ತೆರಿಗೆ ಪಾವತಿ ಹಣವನ್ನು ಬಿಡುಗಡೆ ಮಾಡಬೇಕೆಂದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಎನ್.ಎಸ್.ಯು.ಐ ಘಟಕದವತಿಯಿಂದ ಬಳ್ಳಾರಿ ಸಂಸದರ ಕಛೇರಿಗೆ ಮುತ್ತಿಗೆ ಹಾಕಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದು.
ಈ ಸಂದರ್ಭದಲ್ಲಿ ಬಿ.ಎಂ ಪಾಟಿಲ್, ವೆಂಕಟೆಶ್ ಹೆಗಡೆ, ಪದ್ಮಾ, ಜುಬೇರ್, ನಂದೀಶ್, ಶ್ರೀಕಾಂತ್, ಅಖಿಲ್, ಮಂಜು ಅಮರಾಪುರ ಸೇರಿದಂತೆ ಹಲವಾರು ಎನ್.ಎಸ್.ಯು.ಐ ಘಟಕದ ಪದಾಧಿಕಾರಿಗಳಿದ್ದರು.
ರಾಜ್ಯದ ಪಾಲು ೧,೮೭,೦೦೦/-ಕೋಟಿ ತೆರಿಗೆ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲು ಎನ್.ಎಸ್.ಯು.ಐ ಒತ್ತಾಯ.
