ಅಂಜಲಿ ಮನೆಯಲ್ಲಿ ಯಾರೂ ಗಂಡಮಕ್ಕಳಿಲ್ಲ. ಅಂಜಲಿ ಅಜ್ಜಿಯೇ ಮೊಮ್ಮಕ್ಕಳನ್ನ ಕೂಲಿ ನಾಲಿ ಮಾಡಿ ಸಾಕ್ತಿದ್ರು. ಅಂಜಲಿ ಕೂಡ ದುಡಿದು ಅವರ ಕುಟುಂಬ ನೋಡಿಕೊಳ್ಳುತ್ತಿದ್ದಳು. ಆದರೆ ಅಂಜಲಿ ಕೊಲೆಯಾದ ಬಳಿಕ ದುಡಿಯೋರು ಯಾರೂ ಇಲ್ಲದಂತಾಗಿದೆ. ಹೀಗಾಗಿ ಅಂಜಲಿ ಅಜ್ಜಿ ಕಣ್ಣೀರು ಹಾಕುತ್ತಿದ್ದಾರೆ. ಮನೆ ಬಾಡಿಗೆ ಕೂಡಾ ಹೆಚ್ಚಿಗೆ ಮಾಡಿದ್ದಾರೆ. ನಾವು ಹೇಗೆ ಜೀವನ ಮಾಡೋದ ಎಂದ ಅಳಲು ತೋಡಿಕೊಳುತ್ತಿದ್ದಾರೆ.
ಅಂಜಲಿ ಕೊಲೆಯಾದ ಸಮಯದಲ್ಲಿ ಸರ್ಕಾರ ಕಣ್ಣೊರೆಸೋ ತಂತ್ರ ಮಾಡಿತ್ತು. ಉದ್ಯೋಗ ಮನೆ, ಪರಿಹಾರದ ಭರವಸೆ ನೀಡಿತ್ತು. ಆದ್ರೆ ಸರ್ಕಾರ ಗ್ಯಾರಂಟಿಗೆ ಹಣ ಹೊಂದಿಸೋಕೆ ಪರದಾಡ್ತಿದೆ. ಹೀಗಾಗಿ ಪರಿಹಾರ ಕೊಡೋಕು ಸರ್ಕಾರದ ಬಳಿ ಹಣ ಇಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ. ಕೇವಲ ಮಾತು ಕೊಟ್ಟ ಸರ್ಕಾರ ನಂತರ ಮರೆತು ಬಿಟ್ಟಿದೆ. ನಿತ್ಯ ದುಡಿದು ಜೀವನ ಮಾಡ್ತಿದ್ದ ಅಂಜಲಿ ಕುಟುಂಬದ ಕಣ್ಣೀರು ಇನ್ನು ನಿಂತಿಲ್ಲ.
ಹೆಚ್ಚು ಕಡಿಮೆ ಅಂಜಲಿ ಕೊಲೆಯಾಗಿ ಮೂರು ತಿಂಗಳ ಆಗ್ತಾ ಬಂತು, ಸರ್ಕಾರದ ಭರವಸೆ ಮರೀಚಿಕೆಯಾಗಿದೆ. ಮನೆ ಬಾಡಿಗೆಗೆ ಹಣ ಕಟ್ಟೋಕು ಕುಟುಂಬ ಕಷ್ಟ ಪಡ್ತಿದೆ. ಸರ್ಕಾರದ ನಡೆಗೆ ಬಿಜೆಪಿ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಅಂಜಲಿ ಕುಟುಂಬಸ್ಥರು ಉಳ್ಳವರಲ್ಲ, ಅವರು ಬಡವರು ಅಕಸ್ಮಾತ್ ಅವರಿಗೆ ಪರಿಹಾರ ಕೊಡದೆ ಹೊದ್ರೆ ಅವರ ಶಾಪ ತಟ್ಟುತ್ತೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ದಿನಬೆಳಗಾದ್ರೆ ಸಿಎಂ ಡಿಸಿಎಮ್ ಕಿತ್ತಾಟದಲ್ಲಿರೋ ರಾಜ್ಯ ಸರ್ಕಾರ ಬಡವರಿಗೆ ಪರಿಹಾರ ಕೊಡೋದನ್ನೆ ಮರೆತಂತಿದೆ. ಗ್ಯಾರಂಟಿಗಾಗಿ ಪೆಟ್ರೋಲ್, ಡಿಸೇಲ್, ಹಾಲಿನ ದರವೂ ಹೆಚ್ಚಳವಾಗಿದೆ. ಆದ್ರೆ ಸರ್ಕಾರದ ಸಚಿವರೇ ಕೊಟ್ಟ ಭರವಸೆ ಇನ್ನು ಮರೀಚಿಕೆಯಾಗಿದೆ. ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಿ ಬಡ ಕುಟುಂಬದ ಕಣ್ಣೀರನ್ನ ಒರೆಸಬೇಕಿದೆ.