ಬಳ್ಳಾರಿ, ಜು.17: ಲೇಔಟ್ ಹಸ್ತಾಂತರಕ್ಜೆ ಸಂಬಂಧಿಸಿ 7 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟು. 2 ಲಕ್ಷ ರೂ ಸ್ವೀಕರಿಸುವಾಗ ತಾಲೂಕಿನ ಶ್ರೀಧರಗಡ್ಡೆ ಗ್ರಾಮ ಪಂಚಾಯ್ತಿಯ ಪಿಡಿಓ ಪ್ರಾಣೇಶ್ ನಿನ್ನೆ ಸಂಜೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ದೂರದಾರ ವೀರೇಶ್ ಎನ್ನುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು. ದೂರುದಾರನಿಂದ 2 ಲಕ್ಷದ ಹಣವನ್ನು ನಗರದ ಕಪ್ಪಗಲ್ ರಸ್ತೆಯ ಬಲ ಬದಿಯ 7 ನೇ ಕ್ರಾಸ್ ನಲ್ಲಿರುವ ಖಾಸಗಿ ವ್ಯಕ್ತಿ ಶಂಕರ್ ಅವರ ಡಿಟಿಪಿ ಸೆಂಟರ್ ನಲ್ಲಿ ಮನೆಯಲ್ಲಿ ಸ್ವೀಕರಿಸುವಾಗ ದಾಳಿ ಮಾಡಲಾಗಿದೆ.