ಬಳ್ಳಾರಿ,ಡಿ.28: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಕ್ರಮವಾಗಿ ಪಡಿತರ ಕಾಳಸಂತೆಯಲ್ಲಿ ಎಗ್ಗಿಲ್ಲದೇ ಮಾರಾಟವಾಗುತ್ತಿದ್ದು, ಒಂದೇಡೆ ಪ್ರಕರಣ ದಾಖಲಾದರೇ ಮತ್ತೊಂದಡೇ ಪ್ರಕರಣ ಬೆಳಕಿಗೆ ಬರದೇ ಇರುವುದು ವಿಪರ್ಯಾಸವೇ ಸರಿ. ಅಕ್ರಮ ಪಡಿತರವನ್ನು ಸಾಗಿಸುವ ಸಾಕಷ್ಟು ಅಪಾಯ, ಹಾನಿ ಆದರೂ ಇದನ್ನು ತಡೆಗಟ್ಟದೇ ಇರುವುದು ನಾಚಿಗೇಡಿನ ಸಂಗತಿಯಾಗಿದೆ. ಆದರೆ ಈಗ ಇದೇ ಅಕ್ರಮ ಪಡಿತರ ಅಕ್ಕಿ ದಂಧೆ ಇಬ್ಬರ ಅಮಾಯಕರ ಬಲಿ ಪಡೆದಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ಹತ್ತಿರ ಸಂಭವಿಸಿದೆ.
ಕುರುಗೋಡು ತಾಲೂಕಿನ ಮದಿರೆ ಕ್ರಾಸ್ ಬಳಿ, ಅಕ್ರಮ ಪಡಿತರ ಅಕ್ಕಿ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗುವ ಬೊಲೆರೋ ಕೆಎ೩೪ ಸಿ೦೪೪೯ ಆಗಿದ್ದು, ಸರಕು ಸಾಗಾಣೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಶನಿವಾರ ನಸುಕಿನ ಜಾವ ಸಂಭವಿಸಿದೆ.
ಕೋಳೂರು ಕ್ರಾಸ್ನಿಂದ ಕುರುಗೋಡು ಕಡೆಗೆ ಹೋಗುತ್ತಿದ್ದ ಬಾದನಹಟ್ಟಿಯ ರಂಗಪ್ಪ(೪೦) ಮತ್ತು ಕಲ್ಲುಕಂಬದ ಪರಮೇಶ್(೩೨) ಮೃತಪಟ್ಟ ನಥದೃಷ್ಟರಾಗಿದ್ದಾರೆ. ಅತೀ ವೇಗದಿಂದಾಗಿ ಪಲ್ಟಿಯಾದ ರಭಸಕ್ಕೆ ರಸ್ತೆ ಪಕ್ಕದ ಕಾಲುವೆಗೆ ಬೊಲೆರೋ ಕ್ಯಾಂಪರ್ ವಾಹನ ಬಿದ್ದು, ಈ ದುರ್ಘಟನೆ ನಡೆದಿದೆ. ವಾಹನದಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್ ಗೆ ರವಾನಿಸಲಾಗಿದ್ದು, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ವಿವಿಧ ಹಳ್ಳಿಗಳಲ್ಲಿ ಸಂಗ್ರಹಿಸಿದ ಪಡಿತರ ಅಕ್ಕಿಯನ್ನು ಬೊಲೆರೋ ವಾಹನದಲ್ಲಿ ಕಳ್ಳಸಾಗಾಣೆ ಮಾಡಲಾಗುತಿತ್ತು
ಎಂಬ ಆರೋಪ ಕೂಡಾ ಕೇಳಿಬರುತ್ತಿದೆ. ಅಪಘಾತ ನಡೆದ ಸ್ಥಳದಲ್ಲಿ ರಸ್ತೆ ಮತ್ತು ಕಾಲುವೆ ತುಂಬ ಅಕ್ಕಿ ಪ್ಯಾಕೇಟ್ ಬಿದ್ದಿವೆ. ಆದರೇ ಯಾವುದೇ ಅಕ್ಕಿ ಚೀಲಗಳು ಸ್ಥಳದಲ್ಲಿ ದೊರೆತಿಲ್ಲ. ಅಪಘಾತದ ವಿಷಯ ತಿಳಿದ ಕೂಡಲೇ ಬೊಲೆರೋ ಕ್ಯಾಂಪರ್ನಲ್ಲಿದ್ದ ಅಕ್ಕಿಯನ್ನು ಕೆಎ೩೭, ಬಿ೭೯೬೩ ನಂಬರಿನ ಲಾರಿ ಮುಖಾಂತರ ಶಿಫ್ಟ್ ಮಾಡಲಾಗಿದೆ ಎನ್ನಲಾಗುತ್ತದೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ಘಟನೆ ಮಧ್ಯಾಹ್ನ ೩ಗಂಟೆ ಸುಮಾರಿಗೆ ದಾಖಲಾಗಿದೆ.
ಕುರುಗೋಡು ಕೇಂದ್ರವಾಗಿ ಪಡಿತರ ದಂಧೆ: ಹಲವು ವರ್ಷಗಳಿಂದ ಕುರುಗೋಡು ತಾಲೂಕಿನಾದ್ಯಂತ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿ, ಅಧಿಕ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುವ ಈ ಅಕ್ರಮ ದಂಧೆ ಅವ್ಯಾಹತವಾಗಿ ಸಾಗುತ್ತಿದೆ. ನಂಬರ್ ಪ್ಲೇಟ್ ಬದಲಿಸಿ ವಾಹನಗಳ ಮೂಲಕ ಅಕ್ಕಿಯ ಸಾಗಾಟವನ್ನು ಖದೀಮರು ಮಾಡುತ್ತಿದ್ದಾರೆ. ಹೀಗೆ ಮಾರಾಟ ಮಾಡಲು ಅಕ್ರಮವಾಗಿ ಅಕ್ಕಿ ಸಾಗಿಸಬೇಕಾದ ಸಂದರ್ಭದಲ್ಲಿಯೇ ಈ ಬೊಲೇರೋ ಕ್ಯಾಂಪರ್ ಪಲ್ಟಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.
ಬಡವರ ಹೊಟ್ಟೆ ತುಂಬಿಸಲು ಬಳಸಬೇಕಾದ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಈ ದಂಧೆಗೆ ಕಡಿವಾಣ ಬೀಳುವುದು ಯಾವಾಗ ಎಂಬ ಪ್ರಶ್ನೆಯನ್ನು ಪ್ರಜ್ಞಾವಂತರು ಕೇಳುತ್ತಿದ್ದಾರೆ.
ಘಟನೆ ವಿವರ: ಘಟನೆ ವೇಳೆ ಚಾಲಕನ ಜೊತೆಗೆ ಅಕ್ಕಿ ಮೂಟೆ ತುಂಬಿದ್ದ ನಾಲ್ವರು ಯುವಕರು, ಇಬ್ಬರು ಯುವಕರು ವಾಹನದ ಮೇಲೆ ಅಕ್ಕಿಯಿಂದ ಟಾರ್ಪಲ್ ಹಾಕಿಕೊಂಡು ಮಲಗಿದ್ದರು, ಇನ್ನಿಬ್ಬರು ಎಚ್ಚರಗೊಂಡಿದ್ದರು. ಅವಘಡ ಸಂಭವಿಸಿದಾಗ ವಾಹನ ರಸ್ತೆಯ ಎಡಭಾಗದ ಕಾಲುವೆ ನೀರಿಗೆ ಬಿದ್ದಿದ್ದು, ಅಕ್ಕಿ ಮೂಟೆಗಳ ಮೇಲೆ ಟಾರ್ಪಲ್ ಹಾಕಿಕೊಂಡು ಮಲಗಿದ್ದವರ ಮೇಲೆ ಅಕ್ಕಿ ಮೂಟೆಗಳು ಬಿದ್ದಿವೆ. ಅಪಘಾತದಿಂದ ವಾಹನ ಚಾಲಕ ಪಾರಾದರೆ, ಹಿಂಬದಿಯಲ್ಲಿ ಕುಳಿತಿದ್ದ ಇನ್ನಿಬ್ಬರು ಯುವಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿ ಘಟನೆ ನಡೆದಿದ್ದರಿಂದ ಹೊರಗೆ ಬಂದಿರಲಿಲ್ಲ. ಅಪಘಾತದಿಂದ ಪಾರಾದ ಚಾಲಕ ಅಕ್ಕಿ ವ್ಯಾಪಾರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ.
ಹಾನಿಗೀಡಾದ ಮತ್ತೊಂದು ವಾಹನವನ್ನು ಸ್ಥಳಕ್ಕೆ ತಂದು ಜೆಸಿಬಿ ಸಹಾಯದಿಂದ ಪಲ್ಟಿಯಾದ ಲಗೇಜ್ ವಾಹನವನ್ನು ಮೇಲೆತ್ತಿ ಅಕ್ಕಿ ಮೂಟೆಗಳನ್ನು ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪ ಕೇಳಿಬರುತ್ತದೆ. ಅಪಘಾತದ ರಭಸಕ್ಕೆ ಅಕ್ಕಿ ಮೂಟೆಗಳು ಬಿದ್ದು ಇಬ್ಬರು ಯುವಕರು ಉಸಿರುಗಟ್ಟಿ ಸಾವನ್ನಪ್ಪಿದ್ದನ್ನು ಗಮನಿಸಿದ ವ್ಯಾಪಾರಿ ಎರಡು ಶವಗಳನ್ನು ಮತ್ತೊಂದು ವಾಹನಕ್ಕೆ(ಕೆಎ೩೪, ಎ೯೦೫೨) ಶಿಫ್ಟ್ ಮಾಡಿ ವಿಮ್ಸ್ಗೆ ಕೊಂಡೊಯ್ಯದಿದ್ದಾರೆ. ರಾತ್ರಿ ವೇಳೆ ಘಟನೆ ನಡೆದಿದ್ದು, ಯಾರಿಗೂ ಗೊತ್ತಾಗಿಲ್ಲ. ಅಪಘಾತ ಸಂಭವಿಸಿದ ಪ್ರದೇಶ.. ಕತ್ತಲು. ಆಗ ಆ ರಸ್ತೆಯಲ್ಲಿ ಕೆಲವೇ ವಾಹನಗಳು ಇದ್ದುದರಿಂದ ಅಕ್ರಮ ಅಕ್ಕಿ ದಂಧೆಕೋರರ ಕಾರ್ಯಕ್ಕೆ ಕಡಿವಾಣ ಬಿದ್ದಿರುವುದು ಸ್ಪಷ್ಟವಾಗಿದೆ.
ಕುರಗೋಡು ಗ್ರಾಮದ ಜನರು ತಡವಾಗಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದರು. ಘಟನೆಯ ನಂತರ, ‘ಘಟನಾ ಸ್ಥಳಕ್ಕೆ ಕುರುಗೋಡು ಪೊಲೀಸರು ಆಗಮಿಸಿದ್ದು, ಮೃತರ ಶವಗಳು, ಗಾಯಾಳುಗಳು, ವಾಹನದ ಚಾಲಕ ಸ್ಥಳದಲ್ಲಿ ಇಲ್ಲದಿರುವುದರಿಂದ ಪೊಲೀಸರಿಗೆ ಏನಾಯಿತು ಎಂದು ಅರ್ಥವಾಗಲಿಲ್ಲ. ಸ್ಥಳೀಯ ಪ್ರಕಾರ ಉಜ್ಜಲಪೇಟ ಗ್ರಾಮದ ನಿವಾಸಿಗಳಾದ ಎರ್ರಿಸ್ವಾಮಿ ಮತ್ತು ಉಮೇಶ್ ಎನ್ನುವವÀರು ಕುರುಗೋಡು, ಮೋಕ, ಬಳ್ಳಾರಿ ಮತ್ತಿತರರ ಪ್ರದೇಶದಲ್ಲಿ ಬಡವರಿಗೆ ವಿತರಿಸುತ್ತಿದ್ದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ತುಮಕೂರು, ಗಂಗಾವತಿಗೆ ಮಾರಾಟ ಮಾಡಲಾಗುತ್ತದೆ ಎನ್ನುವ ಗುಸು ಗುಸು ಕೇಳಿಬರುತ್ತದೆ.
ಇಬ್ಬರು ಯುವಕರು ವಿವಾಹವಾಗಿರುವುದರಿಂದ ಇವರನ್ನು ನಂಬಿದ ಪತ್ನಿ, ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಹಣ ಗಳಿಸುವ ನಿರೀಕ್ಷೆಯಲ್ಲಿದ್ದ ಯುವಕರು ಅಜ್ಞಾತ ಲೋಕಕ್ಕೆ ತೆರಳಿದ್ದು, ಎರಡೂ ಗ್ರಾಮಗಳಲ್ಲಿ ಕರಿಛಾಯೆ ಆವರಿಸಿದೆ.
ಅಕ್ರಮ ಅಕ್ಕಿ ದಂಧೆಕೋರರ ನಡುವೆ ಜಿದ್ದಾಜಿದ್ದಿ :
ಈ ಹಿಂದೆ ಬಳ್ಳಾರಿ ನಗರದಲ್ಲಿ 2022 ರ ಸೆಪ್ಟೆಂಬರ್ ತಿಂಗಳಿನಲ್ಲಿ ಅಕ್ರಮ ಅಕ್ಕಿ ವ್ಯಾಪಾರಿ ಕುಂಟ ಮಂಜು ಎಂಬ ವ್ಯಕ್ತಿಯನ್ನು ರೇಡಿಯೋ ಪಾರ್ಕ್ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಂದು ಬಳ್ಳಾರಿ ನಗರದಲ್ಲಿ ಬಡವರ ಅಕ್ಕಿಯನ್ನು ಕಾಳಸಂತೆಗೆ ಸಾಗಿಸಲು ಕೆಲ ವ್ಯಾಪಾರಿಗಳು ಅಡ್ಡಿ ಪಡಿಸಲು ಮಂಜು ಎಂಬಾತನನ್ನು ಬರ್ಬರವಾಗಿ ಕೊಂದ ಘಟನೆ ರಾಜ್ಯಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಕೊಲೆಯ ದೃಶ್ಯ ಸಮೀಪದಲ್ಲಿ ಆಸ್ಪತ್ರೆಯೊಂದರ ಸಿಸಿ ಕ್ಯಾಮೇರಾದಲ್ಲಿ ದಾಖಲಾಗಿದ್ದರಿಂದ ಕೌಲ್ಬಜಾರ್ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಈ ಕೊಲೆಯ ನಂತರ ಬಳ್ಳಾರಿಯನ್ನು ಕೇಂದ್ರವಾಗಿಟ್ಟುಕೊAಡಿದ್ದ ಅಕ್ರಮ ಅಕ್ಕಿ ದಂಧೆ ಕೊಂಚ ಕಡಿಮೆಯಾಯಿತು. ಬಳ್ಳಾರಿ ಬಿಟ್ಟು ಸುತ್ತಲಿನ ಕುರುಗೋಡು, ಮೋಕಾ ಮುಂತಾದ ಗ್ರಾಮಗಳಲ್ಲಿ ಸ್ಟಾಕ್ ಪಾಯಿಂಟ್ ಗಳನ್ನು ನಿರ್ಮಿಸಿ ಅಕ್ರಮವಾಗಿ ಪಡಿತರ ಸಂಗ್ರಹ ಮಾಡುತ್ತಿದ್ದರು ಎನ್ನುವ ಆರೋಪ ಕೇಳಿಬರುತ್ತಿದೆ.
ಈ ಘಟನೆಯಿಂದ ತುಂಬಾ ನೋವಾಗಿದೆ. ಪಡಿತರ ಅಕ್ಕಿ ದಂಧೆ ನಡೆಸುತ್ತಿರುವ ಕುರುಗೋಡು ರ್ರೀಸ್ವಾಮಿ, ಗಂಗಾವತಿಯ ಸಿಂಗನಾಳ್ ಸುರೇಶ್ ಮತ್ತಿತರರ ವಿರುದ್ಧ ಕಠಿಣ ಕೈಗೊಳ್ಳಬೇಕು. ಬಳ್ಳಾರಿ ಕೇಂದ್ರವಾಗಿ ಅಕ್ಕಿ ದಂಧೆ ಜನರ ಮೇಲೆ ಸುಮಾರು ಪ್ರಕರಣ ದಾಖಲಾಗಿದ್ದರು ಗಡಿಪಾರು ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಕಾಳಸಂತೆಯಲ್ಲಿ ಅಕ್ರಮವಾಗಿ ಪಡಿತರ ಮಾರಾಟದಲ್ಲಿ ಪಾಲ್ಗೊಂಡವರನ್ನು ಗಡಿಪಾರು ಮಾಡಬೇಕು. ಯಾರು ಈ ಪ್ರಕರಣದಲ್ಲಿ ಪಾಲ್ಗೊಂಡರನ್ನು ಪತ್ತೆಹಚ್ಚಿ ತನಿಖೆ ಮಾಡಿ, ಕೇಸ್ ದಾಖಲಾಗಿಸಬೇಕು. ಕುರುಗೋಡು ಘಟನೆ ಮರುಕಳಿಸದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವಹಿಸಬೇಕು.
-ತಾಯಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ, ಬಳ್ಳಾರಿ.