ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನ ಹೊಸ ದರೋಜಿ ಗ್ರಾಮ ಪಂಚಾಯತಿಯಲ್ಲಿ ಈ ಸ್ವತ್ತು ತಂತ್ರಾಂಶದಲ್ಲಿ ಸುಳ್ಳು ದಾಖಲೆಗಳನ್ನು ಅಪ್ಲೋಡ್ ಮಾಡಿ ಸಾರ್ವಜನಿಕರಿಗೆ ನಮೂನೆ 9, 11 ಎ ಮತ್ತು 11ಬಿ ಅಕ್ರಮವಾಗಿ ನೀಡಿ
ಹಗರಣವನ್ನು ನಡೆಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಪಿಡಿಓ ಸಿದ್ದಲಿಂಗ ಸ್ವಾಮಿ ಮತ್ತು ಎಸ್ ಡಿ ಎ ಸಿದ್ದರಾಮ ಮಹದೇವ ತೊರವಿ ಇವರನ್ನು ಕೂಡಲೇ ಅಮಾನತು ಮಾಡಿ ಉನ್ನತ ತನಿಖೆಯನ್ನು ನಡೆಸಬೇಕು.
ಭೀಮ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷ ಕೆ ವೆಂಕಟೇಶ್ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಇವರ ವಿರುದ್ಧ ದೂರನ್ನು ನೀಡಿ ಕೂಡಲೆ ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು.
ಅವರು ಇಂದು ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಉಪ ಕಾರ್ಯದರ್ಶಿಯವರಿಗೆ ಸವಿವಿವಾರವಾದ ದೂರಿನ ಮನವಿ ಪತ್ರವನ್ನು ಸಲ್ಲಿಸಿ,
ಈ ಇಬ್ಬರು ಅಧಿಕಾರಿಗಳು 2023-24 ನೇ ಸಾಲಿನಲ್ಲಿ ಭಾರಿ ಅಕ್ರಮವನ್ನು ನಡೆಸಿ ಇ-ಸ್ವತ್ತು ಮೂಲಕ ಸಾರ್ವಜನಿಕರ ಹಣವನ್ನು ದುರಪಯೋಗ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ನಮ್ಮ ಸಂಘಟನೆಗೆ ಸಾರ್ವಜನಿಕರು ತಿಳಿಸಿದ್ದಾರೆ.
ದರೋಜಿ ಗ್ರಾಮ ಪಂಚಾಯಿತಿ ಎಸ್.ಡಿ.ಎ. ಸಿದ್ದರಾಮ ಮಹದೇವ ತೊರವಿ ಮತ್ತು ಪಿ.ಡಿ.ಓ. ಸಿದ್ದಲಿಂಗ ಸ್ವಾಮಿ ಸ್ಪಷ್ಟವಾಗಿ ತಮ್ಮ ಇ-ಸ್ವತ್ತು ಲಾಗಿನ್ ನ ಅಧಿಕಾರ ದುರ್ಬಳಕೆ ಮಾಡಿಕೊಂಡು 2ಎಕರೆ 76 ಸೆಂಟ್ಸ್ ಎನ್ . ಎ, ಆಗಿದ್ದು ಯಾವುದೇ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ, ಬಡಾವಣೆ ಆದೇಶ ಪ್ರಾಧಿಕಾರದ ನಿವೇಶನಗಳ ಬಿಡುಗಡೆ ಆದೇಶ ಪ್ರಾಧಿಕಾರದ ಅನುಮೋದಿತ ಬಡಾವಣೆ ನಕ್ಷೆ (ಲೇಔಟ್), ಇಲ್ಲದೆ ಸೈಟ್ ಗಳನ್ನು ಮಾಡಿ ಇ-ಸ್ವತ್ತು ತಂತ್ರಾಂಶದಲ್ಲಿ ಅನಧಿಕೃತ ಧಾಖಲೆಗಳು ಅಪ್ಲೋಡ್ ಮಾಡುವ ಮೂಲಕ 65 ಖಾತೆಗಳನ್ನು ಮಾಡಿ 9-11 ಎ, ಮತ್ತು 9-11ಬಿ ಮಾಡಿರುವುದು ಕಂಡುಬಂದಿದೆ.
ಅದರಿಂದ ಕೂಡಲೇ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ಅಮಾನತ್ತು ಮಾಡಿ ಹೆಚ್ಚಿನ ತನಿಖೆಯನ್ನು ನಡೆಸಿ ಈ ಅಕ್ರಮಗಳನ್ನು ಬಯಲಿಗೆ ತರಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಭೀಮ್ ಆರ್ಮಿ ಸಂಘಟನೆಯಿಂದ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾದ ಮೆಹಬೂಬ್ ಬಾಷಾ, ಸದಸ್ಯರುಗಳಾದ ಕಪಗಲ್ ಪ್ರವೀಣ್ ಎಚ್ ಶಿವಮಣಿ. ನವೀನ್ ಕುಮಾರ್ ಫೈರೋಜ್, ವಾಸಿಮ್ ಫಾರೂಕ್ ಶಾಹಿದ್ ಅದ್ನಾನ್, ಹೊನ್ನೂರ್ ಸ್ವಾಮಿ, ಅಶೋಕ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.