ಬಳ್ಳಾರಿ ಮೇ.2- ಜಿಲ್ಲಾ ಭೋವಿ (ವಡ್ಡರ) ಸಂಘ (ರಿ) ಬಳ್ಳಾರಿ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಜನ ಸಭೆಯನ್ನು ಮುಂದೂಡ ಲಾಗಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ವಿ.ರಾಮಾಂಜಿನೇಯಲು ತಿಳಿ ಸಿದ್ದಾರೆ.
05:05-05-2025 ರಂದು ಸಭೆ ಜರುಗಿಸಲು ಅರ್ಹ ಎಲ್ಲಾ ಸದ ಸ್ಯರಿಗೆ ನೋಟೀಸು ನೀಡುವುದರ ಮೂಲಕ ಕರೆಯಲಾಗಿತ್ತು.
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆ ದಿನಾಂಕ:05-05-2025 ರಿಂದಲೇ ಪ್ರಾರಂಭವಾಗಲಿದ್ದು ಈ ಸಂಬಂಧ ಸಮೀಕ್ಷೆಗೆ ಮನೆ ಮನೆಗೆ ಬಂದಾಗ ಅವರು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಕುರಿತು ಜನಾಂಗದ ಜನರಲ್ಲಿ ಅಗತ್ಯ ತಿಳುವಳಿಕೆ ನೀಡುವ ಕಾರ್ಯವನ್ನು ತುರ್ತಾಗಿ ಸಂಘದಿಂದ ಕೈಕೊಳ್ಳಬೇಕಾಗಿರುವುದ ರಿಂದ
ದಿನಾಂಕ:05-05-2025 ರಂದು ಕರೆ ದಿರುವ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಜನ ಸಭೆಗೆ ಸಂಘದ ಸದಸ್ಯರು ಹಾಜರಾಗುವುದು ಅನಾನುಕೂಲವಾಗುವುದನ್ನು ಗಮ ನಿಸಿ ದಿನಾಂಕ:05-05-2025 ರಂದು ಕರೆದಿರುವ ವಾರ್ಷಿಕ ಮಹಾಜನ ಸಭೆ ಯನ್ನು ಮುಂದೂಡಲಾಗಿದೆ.
ಮುಂದೂಡಿದ ಸಭೆಯನ್ನು ಪರಿ ಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆ ಮುಗಿದ ನಂತರ ಅರ್ಹ ಸದ ಸ್ಯರಿಗೆ ನೋಟೀಸ್ ನೀಡಿ 2024-25 ನೇ ಸಾಲಿನ ವಾರ್ಷಿಕ ಮಹಾಜನ ಸಭೆ ಯನ್ನು ಜರುಗಿಸಲಾಗುವುದೆಂದು ತಿಳಿ ಸಿದ್ದಾರೆ.