ಬಳ್ಳಾರಿ,ಜೂನ್. 1 : ನಗರದ ಮಧ್ಯಭಾಗದಲ್ಲಿರುವ ಕೇಂದ್ರ ಕಾರ್ಯಾಗೃಹದಲ್ಲಿ ಇತ್ತೀಚಿಗೆ ಹೊಸದಾಗಿ ಮೊಬೈಲ್ ಜಾಮರ್ ಅಳವಡಿಸಿರುವುದರಿಂದ, ಜೈಲ್ ನ ಸುತ್ತಮುತ್ತಲ ಪ್ರದೇಶಗಳಲ್ಲಿ ಮೊಬೈಲ್ ನೆಟ್ ವರ್ಕ್ ತುಂಬಾ ಕಳಪೆಯಾಗಿದ್ದು ಸಾರ್ವಜನಿಕರಿಗೆ ಮೊಬೈಲ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ತುಂಬಾ ತೊಂದರೆಯಾಗುತ್ತಿದೆ ಕೂಡಲೇ ಈ ಜಾಮಾರ್ನ ಕೆಪಾಸಿಟಿಯನ್ನು ಕಡಿಮೆಗೊಳಿಸಬೇಕೆಂದು ಜೈಲಿನ ಮುಖ್ಯಸ್ಥರಿಗೆ ಮಾಜಿ ಶಾಸಕ ಸೋಮಶೇಖರ ರೆಡ್ಡಿ
ಮನವಿ ಸಲ್ಲಿಸಿದ್ದಾರೆ.
ಅವರು ಇಂದು ಜೈಲಿನ ಮುಖ್ಯಸ್ಥರಿಗೆ ಮನವಿ ಪತ್ರವನ್ನು ನೀಡಿ ಮಾತನಾಡಿ, ಜಾಮರ್ ಅಳವಡಿಕೆಯಿಂದ ಅಕ್ಕಪಕ್ಕದ ವಾಣಿಜ್ಯ ವ್ಯವಹಾರ ನಡೆಸುತ್ತಿರುವ ಮಳಿಗೆಗಳಲ್ಲಿ ಫೋನ್ ಪೇ ಆರ್ಟಿಜಿಎಸ್ ಸೇರಿದಂತೆ ಹಣ ವರ್ಗಾವಣೆಗೆ ತುಂಬಾ ತೊಂದರೆಯಾಗಿದೆ, ಈ ಕಾರಣದಿಂದಾಗಿ ಅವರು ವ್ಯಾಪಾರ ಕೂಡ ಕಡಿಮೆಯಾಗಿದೆ ಇದರಿಂದ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ, ಮತ್ತು ಸಾರ್ವಜನಿಕರು ಸಹ ತಮ್ಮ ಮೊಬೈಲ್ ಸಂಭಾಷಣೆಯನ್ನು ಬಳಸಲು ತುಂಬಾ ತೊಂದರೆ ಪಡುತ್ತಿದ್ದಾರೆ ಕಳೆದ ಎರಡು ಮೂರು ತಿಂಗಳಿಂದ ಅಧಿಕಾರಿಗಳ ಗಮನಕ್ಕೆ ತಂದರು ಯಾರು ಸಹ ಈ ಬಗ್ಗೆ ಕ್ರಮ ಕೈಗೊಂಡಿರುವುದಿಲ್ಲ ಕೂಡಲೇ ಡಾಂಬರ್ ನ ಕೆಪಾಸಿಟಿಯನ್ನು ಕಡಿಮೆಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಮಹಾನಗರ ಪಾಲಿಕೆ ಸದಸ್ಯರಾದ ಗುಡಿಗಂಟೆ ಹನುಮಂತ, ಕಪ್ಪಗಲ್ ರೋಡ್ ಕೆ .ಹನುಮಂತಪ್ಪ, ಮಹಿಳಾ ಘಟಕದ ಪುಷ್ಪ ಸೇರಿದಂತೆ ಹಲವಾರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿದ್ದರು.