ಬಳ್ಳಾರಿ, ಜೂ.27: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಶುಕ್ರವಾರ ಕ್ಷೇತ್ರದ ವಿವಿಧ ವಾರ್ಡುಗಳಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದರು.
ವಾರ್ಡ್ ಸಂಖ್ಯೆ 23ರ ಮಹಾನಂದಿ ಕೊಟ್ಟಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಗರ ಪ್ರದೇಶದಲ್ಲಿ ಅಂದಾಜು 60 ಲಕ್ಷ ರೂ.ಗಳ ವೆಚ್ಚದಲ್ಲಿ 3 ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭ ಮೇಯರ್ ಮುಲ್ಲಂಗಿ ನಂದೀಶ್, ಉಪ ಮೇಯರ್ ಡಿ.ಕುಸುಂ, ವಾರ್ಡಿನ ಪಾಲಿಕೆ ಸದಸ್ಯ ಪಿ.ಗಾದೆಪ್ಪ, ಮಾಜಿ ಮೇಯರ್-ಸದಸ್ಯೆ ಎಂ.ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ, ವಿಷ್ಣು ಬೋಯಾಪಾಟಿ, ಸುಬ್ಬರಾಯುಡು, ನಾಮನಿರ್ದೇಶಿತ ಸದಸ್ಯ ಸಮೀರ್, ಸಾಹಿತಿ ಎನ್.ಡಿ.ವೆಂಕಮ್ಮ, ಸೋಮಶೇಖರ್, ನಾರಾಯಣ ರೆಡ್ಡಿ, ಮಹೇಂದ್ರ ಮತ್ತಿತರರು ಹಾಜರಿದ್ದರು.
ತದನಂತರ ವಾರ್ಡ್ ಸಂಖ್ಯೆ 35ರ ಇಂದಿರಾ ನಗರದ ಸರ್ಕಾರಿ ಶಾಲೆಯ ಹತ್ತಿರ ಅಂದಾಜು 20 ಲಕ್ಷ ರೂ.ಗಳ ವೆಚ್ಚದ ಚರಂಡಿ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ವಾರ್ಡಿನ ಪಾಲಿಕೆಯ ಸದಸ್ಯ ಮಿಂಚು ಸೀನಾ, ಮಾಜಿ ಮೇಯರ್-ಸದಸ್ಯೆ ಎಂ.ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಗುಡ್ಲೂರು ರವಿ, ಸಿದ್ಧೇಶ್, ಸುಬ್ಬರಾಯುಡು, ಸ್ಥಳೀಯ ಮುಖಂಡರಾದ ಎರುಕುಲಸ್ವಾಮಿ, ಮಾರೆಣ್ಣ ಮೊದಲಾದವರು ಹಾಜರಿದ್ದರು.
ತದನಂತರ ವಾರ್ಡ್ ಸಂಖ್ಯೆ 16ರ ಬಾಪೂಜಿ ನಗರದ ವೃತ್ತದ ಬಳಿ ಇಂದಿರಾ ಕ್ಯಾಂಟೀನ್ ಅನ್ನು ಶಾಸಕ ನಾರಾ ಭರತ್ ರೆಡ್ಡಿಯವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಮೇಯರ್ ಮುಲ್ಲಂಗಿ ನಂದೀಶ್ ಸಾಥ್ ನೀಡಿದರು. ಪಾಲಿಕೆಯ ಸದಸ್ಯೆ ಉಮಾದೇವಿ, ಕಾಂಗ್ರೆಸ್ ಮುಖಂಡರಾದ ಶಿವರಾಜ್, ಬುಜ್ಜಿ ಮೊದಲಾದವರು ಹಾಜರಿದ್ದರು.
ಶಾಸಕ ನಾರಾ ಭರತ್ ರೆಡ್ಡಿ ಕ್ಯಾಂಟೀನಿನ ಆಹಾರ ಸೇವಿಸಿ ರುಚಿ ಹಾಗೂ ಗುಣಮಟ್ಟ ಪರೀಕ್ಷಿಸಿದರು. ಕಾರ್ಯಕರ್ತರಿಗೆ ಕೈ ತುತ್ತು ನೀಡಿ ಉಣ್ಣಿಸಿದರಲ್ಲದೇ, ಕಿಚನ್ ಕೌಂಟರಿನಲ್ಲಿ ನಿಂತು ಆಹಾರ ವಿತರಿಸಿದರು.