ಬಳ್ಳಾರಿ, ಜು.02: ಬಳ್ಳಾರಿ ನಗರದ ಮಧ್ಯ ಭಾಗದಲ್ಲಿ ಕಂಟೋನ್ಮೆಂಟ್, ಎನ್-ಹೆಚ್-67 ರಸ್ತೆಯಲ್ಲಿ ಇರುವ ರೈಲ್ವೇ ಗೇಟ್ನ್ನು ಮುಕ್ತ ರೈಲ್ವೇ ಗೇಟ್ನ್ನಾಗಿ ಮಾಡಿ ಚತುಷ್ಪಥ ಸೇತುವೆಯನ್ನಾಗಿ ಮಾಡುವಂತೆ ಯುವ ಸೇನಾ ಸೋಶಿಯಲ್ ಯ್ಯಾಕ್ಷನ್ ಕ್ಲಬ್ ನವರು ಜಿಲ್ಲಾಧಿಕಾರಿಗಳ ಮೂಲಕ ದೇಶದ ಪ್ರಧಾನಿ, ಹಣಕಾಸು ಸಚಿವರು, ರೈಲ್ವೆ ಸಚಿವರು, ಸಾರಿಗೆ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಸದರಿ ರೈಲ್ವೇ ಗೇಟ್ ರಸ್ತೆಯ ಮೂಲಕ ಹೋಗಿ-ಬರುವ/ಹಾದು ಹೋಗುವ ಎಲ್ಲಾ ವಾಹನಗಳಿಗೆ ಬಾರಿ ತೊಂದರೆಯಾಗುತ್ತಿದೆ. ಮುಖ್ಯವಾಗಿ ಶಾಲಾ ಮಕ್ಕಳಿಗೆ ಖಾಸಗೀ ಮತ್ತು ಸರ್ಕಾರಿ ಕಛೇರಿಗೆ ಹೋಗಿ ಬರುವವರಿಗೆ ಮತ್ತು ಪ್ರಯಾಣಿಕರಿಗೆ ಇನ್ನು ಅನೇಕ ಸಾರ್ವಜನಿಕರಿಗೆ ಹಾಗೂ ಎಲ್ಲಾ ವಾಹನದಾರರಿಗೆ ಪ್ರತಿ ಅರ್ಧ ಗಂಟೆ-ಗಂಟೆಗೆ ಹೋಗಿ-ಬರುವ ಟ್ರೈನ್ ಮತ್ತು ಗೂಡ್ಸ್ಗಳಿಂದ ಸುಮಾರು ಅರ್ಧ ಗಂಟೆ ಕಾಲ ರೈಲ್ವೇ ಗೇಟ್ ಬಂದ್ ಮಾಡುತ್ತಿರುವುದರಿಂದ ಯಾರೂ ಅಡ್ಡಾಡುವ ಪರಿಸ್ಥಿತಿ ಇಲ್ಲಾ, ಕನಿಷ್ಠ ಕಾಲ ಒಂದು ಟ್ರೈನ್ ಹೋಗಬೇಕಾದರೆ ಸುಮಾರು ಅರ್ಧ ಗಂಟೆ ಕಾಲ ಗೇಟ್ ಬಂದ್ ಮಾಡುತ್ತಾರೆ. ಇದರಿಂದ ಎಲ್ಲಾ ವಾಹನದಾರರಿಗೂ ಹೋಗಿ-ಬರುವುದಕ್ಕೆ ತುಂಬಾ ತೊಂದರೆ ಉಂಟಾಗುತ್ತ್ತಿದೆ. ಈ ವಿಷಯದ ಬಗ್ಗೆ ಚರ್ಚಿಸಿ, ಇದಕ್ಕೆ ಬರುವ ಅನುದಾನಗಳನ್ನು ಮುಂದೆ ಬರುವ ಬಡ್ಜೆಟ್ನಲ್ಲಿ ಮಂಡನೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಯುವಸೇನ ಸೋಶಿಯಲ್ ಯ್ಯಾಕ್ಷನ್ ಕ್ಲಬ್ ನ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ, ಸಾಮಾಜಿಕ ಕಾರ್ಯಕರ್ತರಾದ ಎಸ್.ಕೃಷ್ಣ, ಜಿ.ಎಂ. ಭಾಷ, ಪಿ.ಶ್ರೀನಿವಾಸರೆಡ್ಡಿ, ಉಪ್ಪಾರ ಮಲ್ಲಪ್ಪ ಶ್ರೀನಿವಾಸರೆಡ್ಡಿ.ಎಂ, ಎಂ.ಕೆ.ಜಗನ್ನಾಥ, ಪಿ.ನಾರಾಯಣ, ಕೆ.ವೆಂಕಟೇಶ, ಎಂ. ಅಭಿಷೇಕ್ ಮತ್ತು ಇತರರು ಇದ್ದರು.