ಬಳ್ಳಾರಿ, ಜೂ.01: ಅಧಿಕಾರ ಇಲ್ಲದಿರುವಾಗಲೇ ವಂಚನೆ ಮಾಡುತ್ತಿರುವ ಪ್ರತಾಪ್ ರೆಡ್ಡಿ ಭ್ರಷ್ಟ, ರೈತರಿಗೆ ಹಿಂಸೆ ನೀಡುವ ವ್ಯಕ್ತಿತ್ವ ಹೊಂದಿದ್ದಾರೆಂದು ಅಧಿಕಾರ ಬಂದರೆ ಈತ ಇನ್ನೂ ಭ್ರಷ್ಟನಾಗಿ ದರ್ಪದಿಂದ ಮೆರೆಯಲಿದ್ದಾನೆ.
ಅದಕ್ಕಾಗಿ ಈತನಿಗೆ ಮತ ನೀಡಬೇಡಿ ಎಂದು ರಕ್ಷಣಾ ವೇದಿಕೆಯ ಮುಖಂಡ ಕರಿಯಪ್ಪ ಗುಡಿಮುನಿ ಮನವಿ ಮಾಡಿದ್ದಾರೆ.
ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ನಗರದ ವಿವಿಧ ಸಮುದಾಯಗಳ 44 ಕುಟುಂಬಗಳು ಹಲವು ದಶಕಗಳಿಂದ 135 ಎಕರೆ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ ನಕಲಿ ದಾಖಲೆ ಸೃಷ್ಟಿ ಮಾಡಿ ನೋಂದಣಿ ಮಾಡಿಕೊಂಡಿದ್ದಾರೆ.
ಜಮೀನು ಕೆಲ ವರ್ಷ ದೌರ್ಜನ್ಯ ಮಾಡಿ ವಶಕ್ಕೆ ಪಡೆಯುವ ಪ್ರಯತ್ನ ಮಾಡಿದ್ದರು. 2014 ರಿಂದ ರೈತರ ವಶದಲ್ಲಿದೆ.
ಜಿಲ್ಲಾಡಳಿತ ಅವರ ಪ್ರಭಾವಕ್ಕೆ ಒಳಗಾಗಿದೆ. ಅಧಿಕಾರಿಗಳೆಲ್ಲ ಶಾಮೀಲಾಗಿದ್ದಾರೆ. ಅದಕ್ಕಾಗಿ ಅವರ ಪರವಾಗಿ ನಮ್ಮ ಗಮನಕ್ಕೆ ಬಾರದಂತೆ ಸರ್ವೇ ಮಾಡಿ ನಕ್ಷೆ ನೀಡಿದೆ. ಇದರ ವಿರುದ್ದ ಹೈ ಕೋರ್ಟಿಗೆ ಹೋಗಿತ್ತು, ಆ ನ್ಯಾಯಾಲಯ ಜಿಲ್ಲಾ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಸೂಚಿಸಿದ್ದು ಪ್ರಕರಣ ವಿಚಾರಣೆಯ ಹಂತದಲ್ಲಿದೆ.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕುಮಾರ ಸಮತಳ ಅವರು ಮಾತನಾಡಿ, ಪ್ರತಾಪ್ ರೆಡ್ಡಿ ಅವರ ಮೇಲೆ ಭೂ ವಂಚನೆ ಪ್ರಕರಣಗಳಿದ್ದು. ಪ್ರಜ್ಞಾವಂತ ಮತದಾರರು ಅವರಿಗೆ ಮತ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಬುಡಾ ಅಧ್ಯಕ್ಷರಾಗಿದ್ದಾಗ ನಗರದ ಸುತ್ತಮುತ್ತಲು ಇದ್ದ ಜಮೀನನ್ನು ಲಪಟಾಯಿಸಲು ಹೊಂಚುಹಾಕಿಕೊಂಡಿದ್ದಾರೆ ಅದಕ್ಕಾಗಿ ಪ್ರಜ್ಞಾವಂತರು ಇವರನ್ನು ಬಿಟ್ಟು ಉತ್ತಮ ಅಭ್ಯರ್ಥಿಗೆ ಮತ ನೀಡಿ ಎಂದರು.
ಎನ್ ಪ್ರತಾಪ್ ಇವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದಾರೆ ಸರಿಯಷ್ಟೆ ಇವರಿಂದ ಅನ್ಯಾಯಕ್ಕೊಳಗಾಗಿ, ಕಷ್ಟವನ್ನು ಅನುಭವಿಸುತ್ತಿರುವ ನೂರಾರು ಕುಟುಂಬಗಳ ನೊವು ಆಲಿಸಿದ ನಂತರ ಎನ್ ಪ್ರತಾಪರೆಡ್ಡಿಯವರನ್ನು ಸೋಲಿಸಬೇಕೋ, ಬೇಡವೋ ನಿರ್ಧರಿಸಬೇಕು ಎಂದು ಕಳಕಳಿಯಿಂದ ಮನವಿಯನ್ನು ಮಾಡಿದ್ದಾರೆ.
ಬಳ್ಳಾರಿ ಬಂಡಿಹಟ್ಟಿ ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ವೆ, ನಂ. 715 ರಲ್ಲಿ 44 ರೈತ ಕುಟುಂಬ 135 ಎಕರೆ ಭೂಮಿಯಲ್ಲಿ 1971 ರ ಟಿನೆಂಟ್ ಆ್ಯಕ್ಟ್ ನಂತೆ ಮಾದಿಗ ಸಮುದಾಯ, ಕುರುಬರು, ಈಡಿಗರು, ಅಗಸ, ಮುಸ್ಲಿಂಸರು, ಹರಿಜನ ಮತ್ತು ಇನ್ನಿತರೆ ಸಮುದಾಯಗಳಿಗೆ ಸರ್ಕಾರ 135 ಎಕರೆ. ಭೂಮಿಯನ್ನು ಹಂಚಿ ಕೊಟ್ಟಿದೆ. (ಫಾರಂ ನಂ.10 ಪ್ರಸ್ತುತ ವಹಾಣಿ ಎಲ್ಲವೂ ಇವೆ), ಅಂದಿನಿಂದ ಇಂದಿನವರೆಗೂ ನೂರಾರು ಕುಟುಂಬಗಳು ಇದೇ ಭೂಮಿಯಲ್ಲಿ ಸಾಗುವಳಿ ಮಾಡುತ್ತಾ ಜೀವನವನ್ನು ಅವಲಂಭಿಸಿದ್ದರು.
2003 ರಿಂದ ಪೆಂಡಿಂಗಾಗಿ 2005 ರಲ್ಲಿ ಎನ್.ಪ್ರತಾಪ್ ರೆಡ್ಡಿಯವರು ಟಿ.ಎಸ್.ನಂಬರ್ 1069, 1070 ಮತ್ತು 1071 ಎಂದು 135 ಎಕರೆ ಬೋಗಸ್ ದಾಖಲೆಗಳು ಸೃಷ್ಟಿ ಮಾಡಿದ್ದಾನೆ.
ಈ ಭೂಮಿಯ ಮೇಲೆ ಕಣ್ಣು ಹಾಕಿದ ಪ್ರತಾಪ್ ರೆಡ್ಡಿ, 2006ರಲ್ಲಿ ಪ್ರತಾಪ ರೆಡ್ಡಿ ತನ್ನ ಹೆಸರಲ್ಲಿ ಹಾಗೂ ಹೆಂಡತಿ ಶೈಲಜಾ ರೆಡ್ಡಿ ಹೆಸರಲ್ಲಿ ಒಟ್ಟು 135 ಎಕರೆ ಭೂಮಿಯನ್ನು ಈಗಿರುವ ಭೂಮಿಯ ಮೂಲ ಮಾಲೀಕರಿಂದ ಕೊಂಡು ಕೊಂಡಿದ್ದೇವೆಂದು ಸುಳ್ಳು ಕಾಗದ ಪತ್ರವನ್ನು ಸೃಷ್ಟಿಸಿಕೊಂಡು ಬಡವರ ಬದುಕಿನ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ.
ನೂರಾರು ಕುಟುಂಬಗಳು ಎನ್.ಪ್ರತಾಪರೆಡ್ಡಿಯವರಿಂದ ಕೋರ್ಟ್ ಕಛೇರಿಗಳು, ಕೇಸುಗಳ ಅಲೆದಾಟದಲ್ಲಿ ಬಡವರ ಕುಟುಂಬಗಳು ಅತ್ಯಂತ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಎನ್.ಪ್ರತಾಪ್ ರೆಡ್ಡಿಯವರು ಹಲವಾರು ಸುಳ್ಳು ಕೇಸುಗಳನ್ನು ದಾಖಲಿಸುವುದು, ಗೂಂಡಾಗಳನ್ನು ಬಿಟ್ಟು ಬೆದರಿಸುವುದು, ಪೋಲೀಸರ ಮೂಲಕ ಕಿರುಕುಳ ನೀಡುವುದು ಕಳೆದ ಹತ್ತಾರು ವರ್ಷಗಳಿಂದ ನಡೆಯುತ್ತಲೇ ಇದೆ.ಇಂತಹ ವ್ಯಕ್ತಿಗಳು ಪದವೀಧರ ಕ್ಷೇತ್ರದಿಂದ ಗೆದ್ದು ಬಂದರೆ ಎನು ಆಗಬಹುದು??. ಪ್ರಜ್ಞಾವಂತರಾಗಿರವ ಎಲ್ಲಾ ಪದವೀಧರ ಕ್ಷೇತ್ರದ ಮತದಾರರು,ಓಟು ಹಾಕುವ ಮುನ್ನವೇ ಯೋಚಿಸಿ, ಯಾವುದೇ ಕಾರಣಕ್ಕೂ ಇಂತಹ ವಿರೋಧಿ ಗಳು ಗೆ ಮತ ನೀಡಬಾರದು ಎಂದು ಮನವಿ ಮಾಡಿದ್ದಾರೆ.ಇಂತಹ ವ್ಯಕ್ತಿಗಳು ಪದವೀಧರ ಕ್ಷೇತ್ರದಿಂದ ಗೆದ್ದು ಬಂದರೆ ಏನಾಗಬಹುದೆಂದು ಪ್ರಜ್ಞಾವಂತರಾಗಿರುವ ಎಲ್ಲಾ ಪದವೀಧರ ಕ್ಷೇತ್ರದ ಮತದಾರರು ಒದು ಹಾಕುವ ಮುನ್ನ ಯೋಚಿಸಿ ಯಾವುದೇ ಕಾರಣಕ್ಕೂ ಇಂತಹ ಜನ ವಿರೋಧಿಗಳಿಗೆ ಮತ ನೀಡಬಾರದೆಂದು ಈ ಮೂಲಕ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕೆ.ಮೋಹನ್, ಕೆ.ನಾಗರಾಜ್, ಗೋಪಿ ಅಲ್ಲಿಪುರ ಕೆ.ಮೋಹನ್, ಶಂಕ್ರಯ್ಯ, ಶಾಂತಯ್ಯ, ರಾಮು, ರಾಜು ನೆಟ್ಟಕಲ್ಲಪ್ಪಮೊದಲಾದವರು ಇದ್ದರು.