ಬಳ್ಳಾರಿ,ಫೆ.03 : ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಯಾಳ್ಪಿ ಗ್ರಾಮದಲ್ಲಿ ಶ್ರೀ ತುಪ್ಪದ ಮಾಳಮ್ಮ ದೇವಿಯ ಜಿರ್ಣೋದ್ಧಾರ ಹಾಗೂ ನವಗ್ರಹ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ ಶ್ರೀ ರಾಮುಲು ಅವರ ಧರ್ಮ ಪತ್ನಿ ಭಾಗ್ಯಲಕ್ಷ್ಮಿ ಅವರು ಭಾಗವಹಿಸಿದ್ದರು.
ಇದೆ ವೇಳೆ ತುಪ್ಪದ ಮಾಳಮ್ಮ ದೇವಿಗೆ ವಿಶೇಷ ಪೂಜೆ ಮಾಡಿಸಿ ದರ್ಶನ ಪಡೆದು ನಾಡಿನ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಚೆಳ್ಳಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯಾಳ್ಪಿ ನಾಗರಾಜ್, ಪುಜಾರಿ ಜಗದೇಶ ತಿಪ್ಪೇಸ್ವಾಮಿ ಗೌನೂರು ಎರ್ರಪ್ಪ, ಹೆಚ್ ಶೇಖರ, ಓಬಳೇಶ್, ಎಮ್. ವೆಂಕಟೇಶ ವಿ .ಆಂಜನೇಯ, ವೈ ಗೋವಿಂದ ಇನ್ನಿತರ ಭಾಗವಹಿಸಿದ್ದರು.