ಸಿರುಗುಪ್ಪ,ಮಾ.25: ಆದಿ ಕಾಲದಿಂದ ಸಾಗಿ ಬಂದAತಹ ಎಲ್ಲಾ ಹಬ್ಬಗಳು ಆಚರಣೆಗಳು ಒಳ್ಳೆಯತನವನ್ನು ಹಾಗೂ ಕೋಮು ಸೌಹಾರ್ದತೆ ಭಾವನೆಯನ್ನು ಮೂಡಿ ಪ್ರೀತಿ ವಿಶ್ವಾಸ ಪ್ರೇಮವನ್ನು
ಗಳಿಸುವಂತಹ ಕಾರ್ಯ ಮಾಡುತ್ತಾ ಸಾಗಿ ಬಂದಿದೆ ಸೌಹಾರ್ದತೆ ಶಾಂತಿಯ ಭಾವನೆ ಎಂಬುದು ಮೂಡಿ ಬರುವುದು ಎಂದು ಡಿ ವೈ ಎಸ್ ಪಿ ವೆಂಕಟೇಶ್ ಉಗಿಬಂಡಿ ಅವರು ಹೇಳಿದರು ಸಿರುಗುಪ್ಪ
ನಗರದ ಪೊಲೀಸ್ ಠಾಣೆಯಲ್ಲಿ ಪವಿತ್ರವಾದ ರಂಜಾನ್ ಯುಗಾದಿ ಹಬ್ಬ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಪ್ರತಿ ವರ್ಷದಂತೆ ಈ ವರ್ಷವೂ ಸಾರ್ವಜನಿಕರ ಸಹಕಾರ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸೂಕ್ತ ಬಂದೋಬಸ್ತ್ ನೀಡಲಾಗುವುದು ಅಹಿತಕರ ಘಟನೆಗಳಾಗದಂತೆ ಹಿರಿಯರು ಕಿರಿಯರು ಎಚ್ಚರಿಕೆ ಯಿಂದಿರಲು
ಸಲಹೆ ಸೂಚನೆ ಪರಸ್ಪರ ಸಾಮರಸ್ಯ ಹಬ್ಬಗಳನ್ನು ಆಚರಿಸಬೇಕು ಎರಡು ಹಬ್ಬಗಳನ್ನು ಸಮುದಾಯದವರು ಶಾಂತಿ ಸೌಹಾರ್ದತೆಯಿಂದ ಆಚರಿಸೋಣ ಎಂದರು ಸಿರುಗುಪ್ಪ ಪೊಲೀಸ್ ಸರ್ಕಲ್
ಇನ್ಸ್ಪೆಕ್ಟರ್ ಹನುಮಂತಪ್ಪ ಅವರು ಸರ್ವರಿಗೂ ಸ್ವಾಗತ ಬಯಸಿ ಮಾತನಾಡಿದರು.
ತೆಕ್ಕಲಕೋಟೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಚಂದನ್ ಗೋಪಾಲ್ ಅವರು ಮಾತನಾಡಿದರು ಮತ್ತು ವಂದಿಸಿದರು .ಸಿರುಗುಪ್ಪ ತಾಲೂಕಿನ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಸಿರುಗುಪ್ಪ ಪರಶುರಾಮ, ವಿ.
ಶ್ರೀನಿವಾಸಲು, ಸಿರಿಗೇರಿ ಸದ್ದಾಮ್ ಹುಸೇನ್ ,ಹಚ್ಚೋಳಿ ಶಶಿಧರ, ತೆಕ್ಕಲಕೋಟೆ ತಾರಾ ಬಾಯಿ
ಸೌದಾಗರ್ ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ ಖಾಜಿ
ಸೈಯದ್ ಜಿಲಾನ್ ಪಾಷಾ ಖಾದ್ರಿ ಖತೀಬ್ ಜಹೀರುದ್ದೀನ್ ಬಾಬು ಖತೀಬ್ ಜಾಕಿರ್ ಹುಸೇನ್ ಡಾ ಮೊಹಮ್ಮದ್ ಅಲಿ,ನಗರಸಭಾ ಮಾಜಿ ಸದಸ್ಯ ಹಾಜಿ ಚೌದ್ರಿ ಖಾಜಾಸಾಬ್ ರಾವಿಹಾಳ್ ಹುಸೇನ್
ಪೀರಸಾಬ್ ಲತೀಫ್ ಬಾಯಿ ಮೊಹಮ್ಮದ್ ಆಜಮ್ ಸಾಬ್ ಗೌಸೇ ರಬ್ಬಾನಿ ಕೆ ಅಬ್ದುಲ್ ಸುಭಾನ್ ಮೊಹಮ್ಮದ್ ನೌಷಾದ್ ಅಲಿ ಲಾಡ್ಕ ಮಸೀದಿ ಹಬೀಬ್ ಸಾಬ್ ಹಾಜಿ ಎಸ್. ಮಹಮ್ಮದ್ ಇಲಿಯಾಸ್ ಹಿಂದೂ ಮುಸಲ್ಮಾನರು ಸೇರಿದಂತೆ ಹಬ್ಬಗಳ ಕುರಿತು ಸಭೆಗೆ ಸಲಹೆ ಸೂಚನೆ ನೀಡಿದರು.