ಸಿರುಗುಪ್ಪ: ಮಾ,25; ವೇದಾವತಿ ನದಿ (ಹಗರಿ)ಗೆ ಏಪ್ರಿಲ್ 10 ರವರೆಗೆ ಕಾಲುವೆ ಮುಖಾಂತರ ನೀರು ಹರಿಸಬೇಕು ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿAಗಪ್ಪ ಹೇಳಿದರು.ನಗರದ ಭಾರತೀಯ ಜನತಾ ಪಾರ್ಟಿಯ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಶಾಸಕರಾದ ಬಿ.ಎಂ.ನಾಗರಾಜ ಇತ್ತೀಚಿಗೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡುತ್ತ ವೇದಾವತಿ ನದಿಗೆ ಸುಮಾರು 25 ರಿಂದ
30 ಟಿಎಂಸಿಯಷ್ಟು ಮೂರು ದಿನಕ್ಕೆ ನೀರು ಹರಿಸಲು ಜಿಲ್ಲಾಧಿಕಾರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಇನ್ಡೆಂಟ್ ಹಾಕಿಕೊಟ್ಟಿದ್ದಾರೆ. ಇದಕ್ಕಾಗಿ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ
ಶಿವಕುಮಾರ್ ಸಾಹೇಬರಿಗೆ ಮತ್ತು ಡಿಸಿ ಸಾಹೇಬರಿಗೆ ಧನ್ಯವಾದಗಳು ಹೇಳುತ್ತೇನೆ ಎಂದು ರೈತರಿಗೆ ಹುಸಿ ಭರವಸೆ ನೀಡಿದ್ದಾರೆ.ಅಲ್ಲದೇ, ದಾಸಪುರ ಎಸ್ಕೇಪ್ ಮಾತ್ರ ನನ್ನ ಕಾರ್ಯ ಕ್ಷೇತ್ರಕ್ಕೆ ಬರುತ್ತಿದ್ದು, ಗುಡೂದೂರು ಎಸ್ಕೇಪ್ ಇತ್ಯಾದಿಗಳನ್ನು ಶಾಸಕ ನಾಗೇಂದ್ರ ಅವರ ಮತ್ತು ಕಂಪ್ಲಿ ಗಣೇಶ ರವರ ಕಾರ್ಯ ಕ್ಷೇತ್ರಕ್ಕೆ ಬರುತ್ತದೆ. ಅವರು ಸಹ ನಮಗೆ ಸಹಕರಿಸುವಂತೆ ವಿನಂತಿಸಿದ್ದೇನೆ ಎಂದು ಮೂಗಿಗೆ ತುಪ್ಪ
ಸವರುವ ಕೆಲಸವನ್ನು ಶಾಸಕ ನಾಗರಾಜ್ ಮಾಡಿದ್ದಾರೆ.ಇದರಿಂದ ರೈತರಿಗೆ ಯಾವ ಪ್ರಯೋಜನವು ಇಲ್ಲ, ಈಗಾಗಲೇ ಹಗರಿ ನದಿ ಅಥವಾ ವೇದಾವತಿ ನದಿ ತೀರದಲ್ಲಿ ಸುಮಾರು ಸಾವಿರ ಎಕರೆ ಬೆಳೆ ನಾಶವಾಗುತ್ತಿದ್ದು, ಈ ಭಾಗದ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಉಸಿ ಭರವಸೆ ನೀಡುವುದು
ನೀಡುವುದು ಬಿಟ್ಟು ಕೇವಲ 500 ಕ್ಯುಸೆಕ್ಸ್ ನೀರು ಹರಿಸಿದರು ಶಾಸಕ ಬಿ.ಎಂ.ನಾಗರಾಜ್ ರವರಿಗೆ ರೈತರ ಪರವಾಗಿ ಧನ್ಯವಾದ ಹೇಳುತ್ತೇನೆ.ಆದರೆ 25 ರಿಂದ 30 ಟಿಎಂಸಿ ನೀರು ಎಂದರೆ ಕನಿಷ್ಠ ಮೂರು ತಿಂಗಳಾದರೂ ಬೆಳೆಯನ್ನು ಬೆಳೆಸಿಕೊಳ್ಳಬಹುದಾಗಿದೆ. ಕೊನೆಯ ಪಕ್ಷ ಒಂದು ಟಿಎಂಸಿ ನೀರು ಎಂದರೆ, ಎಷ್ಟು ನೀರು ಎಂಬ ಪರಿಕಲ್ಪನೆಯಾದರೂ ಶಾಸಕರಿಗೆ ತಿಳಿಯಬೇಕಲ್ಲವೇ, ಒಂದರಿAದ ಎರಡು ಟಿಎಂಸಿ ನೀರು ಹರಿಸಿದರು ದೂರದ ಮಂತ್ರಾಲಯದವರೆಗೆ ಹರಿದು ತಲುಪುತ್ತದೆ. ಆದರಿಂದ ಇಂಥ ಸುಳ್ಳಿನ ಭರವಸೆಗಳನ್ನು ನೀಡಿ ರೈತರ ಕಣ್ಣಿಗೆ ಮಣ್ಣೆರೆಚುವ ಕಾರ್ಯವನ್ನು ಬಿಟ್ಟು ತಕ್ಷಣ ಅನ್ನದಾತನ ಗೋಳನ್ನು ಆಲಿಸಿ ಈ ತಕ್ಷಣವೇ ಎರಡು ಟಿಎಂಸಿ ನೀರನ್ನು ಆzÀರೂ ಹರಿಸಿದರೆ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ ಎಂದು ಸೋಮಲಿಂಗಪ್ಪ ಅಗ್ರಹಿಸಿದರು.ಅಲ್ಲದೇ ಜೋಳ ಖರೀದಿ ಕೇಂದ್ರದಲ್ಲಿನ ನ್ಯೂನ್ಯತೆಗಳನ್ನು ಗುರುತಿಸಿ ತಕ್ಷಣ ಇವುಗಳನ್ನು ಸರಿಪಡಿಸುವಂತೆಯೂ ಮನವಿ ಮಾಡಿದ್ದಾರೆ. ಈ ಬಗ್ಗೆ ಶಾಸಕರು ಖುದ್ದು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂಎಸ್ ಸಿದ್ದಪ್ಪ, ಎಸ್ ಟಿ ಮೋರ್ಚಾ ತಾಲೂಕು ಅಧ್ಯಕ್ಷರಾದ ಬೆಳಗಲ್
ಶಿವಪ್ಪ, ಎಸ್ ಸಿ ಮೋರ್ಚಾ ತಾಲೂಕು ಅಧ್ಯಕ್ಷರಾದ ರಾರಾವಿ ಮಾರೇಶ, ಓಬಿಸಿ ಮೋರ್ಚಾ ತಾಲೂಕು ಅಧ್ಯಕ್ಷರಾದ ಕೋರಿ ಪಿಡ್ಡಯ್ಯ, ಯುವ ಮೋರ್ಚಾ ತಾಲೂಕು ಅಧ್ಯಕ್ಷರಾದ ಶೇಖರ್ ಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಬೆಳಗಲ್ ಬಸವರಾಜ್, ಮುಖಂಡ ರಾದ ವೀರನಗೌಡ, ನಾಗೇಶಪ್ಪ, ಸೋಮಯ್ಯ, ಹನುಮಂತ, ಅಶೋಕ, ಮಹಾದೇವ, ಮೋಹನ್ ರೆಡ್ಡಿ, ವೈ.ಡಿ.ವೆಂಕಟೇಶ, ಗಂಗಪ್ಪ, ಶ್ರೀಶೈಲ, ಮಾದಣ್ಣ, ಸೇರಿದಂತೆ ರೈತರು ಮುಖಂಡರು ಉಪಸ್ಥಿತರಿದ್ದರು.
ವೇದಾವತಿ ನದಿ (ಹಗರಿ)ಗೆ ಏಪ್ರಿಲ್ 10 ರವರೆಗೆ ಕಾಲುವೆ ಮುಖಾಂತರ ನೀರು ಹರಿಸಬೇಕು : ಮಾಜಿ ಶಾಸಕ ಎಂ.ಎಸ್.ಸೋಮಲಿoಗಪ್ಪ
