ಬಳ್ಳಾರಿ: ದೇಶದ ಅಭಿವೃದ್ದಿಯಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಜೊತೆ ಮಾಧ್ಯಮ ಕ್ಷೇತ್ರ ನಾಲ್ಕನೇ ಸ್ಥಂಬವಾಗಿ ಶ್ರಮಿಸುತ್ತಿದೆ. ಈ ಕ್ಷೇತ್ರದಲ್ಲಿ ದುಡಿಯುವ ನೀವು ವರದಿಗಾರಿಕರ ಜೊತೆ ಸಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಕೆಲಸದ ಒತ್ತಡ ನಿವಾರಣೆ ಸಾಧ್ಯ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಹೇಳಿದ್ದಾರೆ.
ಅವರು ಇಂದು ನಗರದ ಪತ್ರಿಕಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗ ಭೂಮಿ ಕಲಾವಿದರೂ ಆಗಿರುವ ಕನ್ನಡ ಪ್ರಭ ಪೋಟೋ ಜರ್ನಲಿಸ್ಟ್ ಪುರುಷೋತ್ತಮ ಹಂದ್ಯಾಳು ಅವರನ್ನು ಸನ್ಮಾನಿಸಿ ಗೌರವಿಸಿ ಮಾತನಾಡುತ್ತಿದ್ದರು.
ಪೋಟೋ ಜನರ್ನಲಿಸ್ಟ್ ಆಗಿ ನಾನು ಪುರುಷೋತ್ತಮ ಅವರನ್ನು ನೋಡಿದ್ದೆ ಅವರು ಖ್ಯಾತ ಕಲಾವಿದರೆಂದು ತಿಳಿದು ಸಂತೋಷವಾಗಿದೆ. ಪತ್ರಕರ್ತರ ಸಂಘದಿಂದ ಅವರನ್ನು ಇಂದು ಗೌರವಿಸಿದ್ದು ಉತ್ತಮ ಕೆಲಸವಾಗಿದೆಂದರು.
ಬಳ್ಳಾರಿಯಲ್ಲಿ ಮಾಧ್ಯಮದವರ ಸಹಕಾರ ಜಿಲ್ಲಾಡಳಿತಕ್ಕಿದೆ. ಚುನಾವಣೆಯಾಗಲಿ, ಅಭಿವೃದ್ಧಿ ಕಾರ್ಯವಾಗಲಿ, ಮಾಧ್ಯಮದವರ ತೊಡಗಿಸಿಕೊಳ್ಳುವಿಕೆ ಸ್ಮರಣೀಯ ಎಂದ ಅವರು,
ಸರ್ಕಾರದ ಯೋಜನೆಗಳನ್ನು ಜನತೆಗೆ ಹೆಚ್ಚು ತಲುಪುವಂತೆ ಮಾಡಿ, ಜಿಲ್ಲೆಯ ಅಭಿವೃದ್ಧಿಯಲ್ಲಿ ಭಾಗಿಯಾಗಿ ಎಂದರು.
ಸನ್ಮಾನಿತರಾಗಿ ಮಾತನಾಡಿದ ಪುರುಷೋತ್ತಮ ಹಂದ್ಯಾಳು ಅವರು, ಮಾಧ್ಯಮ ಪ್ರತಿನಿಧಿಗಳಲ್ಲೂ ಸಾಂಸ್ಕೃತಿಕ ಮನಸ್ಸು ಇರುತ್ತೆ ಅದನ್ನು ಹೊರಗೆ ತರಬೇಕು. ಆ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಪತ್ರಕರ್ತರೇ ವೀರ ಅಭಿಮನ್ಯ ಕಾಳಗ ಬಯಲಾಟ ಪ್ರದರ್ಶನ ನಡೆಸಿ ಗಮನ ಸೆಳೆದಿದ್ದರು. ದನಕಾಯುವವರ ದೊಡ್ಡಾಟ ನಾಟಕ ಪ್ರದರ್ಶನವನ್ನೂ ಮಾಡಿದ್ದಾರೆ.
ಒತ್ತಡದ ಬದುಕಿನ ನಡುವೆ ನಾವು ನಮ್ಮಮನಸ್ಸನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ವೀರಭದ್ರಗೌಡ ಮಾತನಾಡಿ ಎಲ್ಲರ ಸಹಕಾರದಿಂದ ಬರುವ ದಿನಗಳಲ್ಲಿ ಸಂಘದಿಂದ ಉತ್ತಮ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವ ಕಾರ್ಯ ಮಾಡೋಣ ಎಂದರು.
ವಾರ್ತಾ ಇಲಾಖೆಯ ಎಫ್ ಡಿಸಿ ವೊ.ಸಿ..ಗುರುರಾಜ್
ವೇದಿಕೆ ಮೇಲೆ ಇದ್ದರು. ನಿವೃತ್ತ ವಾರ್ತಾಧಿಕಾರಿ ಚೋರನೂರು ಕೊಟ್ರಪ್ಪ, ಹಿರಿಯ ಪತ್ರಕರ್ತ ಎಂ.ಅಹಿರಾಜ್, ತುಂಗಭದ್ರ ರೈತ ಸಂಘದ ಅಧ್ಯಕ್ಷ ದರುಇರು ಪುರುಷೋತ್ತಮಗೌಡ ನಗರದ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ಹೆಚ್.ಎಂ.ಮಹೇಂದ್ರಕುಮಾರ್, ಸ್ವಾಗತ ವೆಂಕೋಬಿ ಸಂಗನಕಲ್ಲು, ಲಕ್ಷ್ಮೀ ಪವನ್ ಕುಮಾರ್ ಪ್ರಾರ್ಥನೆ ಮತ್ತು ವೀರೇಶ್ ಕರೂರು ವಂದನಾರ್ಪಣೆ ಮಾಡಿದರು.