ಬಳ್ಳಾರಿ : ತಾಲೂಕಿನ ಚೆಳ್ಳಗುರ್ಕಿ ಶ್ರೀ ಎರ್ರಿತಾತನವರ ಜಾತ್ರೆ ಪ್ರಯುಕ್ತ ಆಭಿಷೇಕ ಪುಷ್ಪ ಆಲಂಕರ ಮಾಡಿ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಆವರಣದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.
ಇದೆ ವೇಳೆ ಭಕ್ತರು ಸರತಿ ಸಾಲಿನಲ್ಲಿ ನಿಂತುಕೊಂಡು ತಾತನವರ ದರ್ಶನ ಪಡೆದರು.
ಭಾನುವಾರ ಸಾಯಂಕಾಲ ಜರುಗಿದ ರಥೋತ್ಸವದಲ್ಲಿ ಸಹಾಸ್ರರು ಭಕ್ತರು ಹೂ ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಅಲಂಕೃತ ರಥವನ್ನು ದೇವಸ್ಥಾನದ ಆವರಣದಿಂದ ಎದುರು ಬಸವಣ್ಣ ಗುಡಿವರಿಗೆ ಎಳೆದು ಪುನಃ ತಳಕ್ಕೆ ಎಳೆದು ತಂದರು.
ಜಾತ್ರೆಯ ಪ್ರಯುಕ್ತ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸ್ವಯಂಪೇರಿತ ರಕ್ತದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಎರ್ರಿತಾತನವರ ದರ್ಶನ ಪಡೆದ ಶ್ರೀ ರಾಮುಲು :
ಜಾತ್ರೆಯ ಪ್ರಯುಕ್ತ ಮಾಜಿ ಸಚಿವ ಬಿ ಶ್ರೀ ರಾಮುಲು. ಬಳ್ಳಾರಿ ತಾಲೂಕಿನ ಚೆಳ್ಳಗುರ್ಕಿ ಶ್ರೀ ಎರ್ರಿತಾತನವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು . ಇದೆ ವೇಳೆ ಅನ್ನ ಪ್ರಸಾದ ನಿಲಯಕ್ಕೆ ತೆರಳಿ ಪ್ರಸಾದ ಸ್ವೀಕರಿಸಿ ಭಕ್ತಾದಿಗಳಿಗೆ ಪ್ರಸಾದ ನಿಡಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಸಣ್ಣ ಫಕೀರಪ್ಪ. ಹಿರಿಯ ಮುಖಂಡ ಗುರುಲಿಂಗನಗೌಡ. ಮಹಾನಗರ ಪಾಲಿಕೆಯ ಸದಸ್ಯರಾದ ಗೋವಿಂದರಾಜುಲು ,ಭೋಗರಾಜು ,ಶಶಿಗೌಡ ಉಪಸ್ಥಿತರಿದ್ದರು.