ಸಿರುಗುಪ್ಪ, ಏ.2: ಸಿರುಗುಪ್ಪ ತಾಲ್ಲೂಕು ಹಚ್ಚೊಳ್ಳಿ ಪೋಲಿಸ್ ಠಾಣೆ ವತಿಯಿಂದ ಕುಡಿಯುವ ನೀರಿನ ಅರವಟಿಗೆ ವ್ಯವಸ್ಥೆ ಉದ್ಘಾಟಿಸಿ ಪಿಎಸ್ಐ ಶಶಿಧರ್ ತಿಮ್ಮಪ್ಪ ಮಾತನಾಡಿ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತಲೆ ಇದೆ.
ಪೋಲಿಸ್ ಠಾಣೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಈ ಕಡು ಬೆಸಿಗೆಯಲ್ಲಿ ಬಿಸಿಲ ಧಗೆಯಿಂದ ಬಾಯಾರಿಕೆ ಬಂದವರು ಇಲ್ಲಿ ಸ್ವಲ್ಪ ಹೊತ್ತು ತಂಗಿ,ಇಲ್ಲಿ ಮಡಿಕೆಯಲ್ಲಿ ಇಡಲಾದ ತಂಪಾದ ಕುಡಿಯುವ ನೀರು ಸೇವಿಸಿ ದಾಹ ನಿಗಿಸಲು ನೆರವಾಗುತ್ತದೆ ಎಂದು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೋಲಿಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರು ಸ್ಥಳೀಯ ಮುಖಂಡರು ಇನ್ನಿತರು ಉಪಸ್ಥಿತರಿದ್ದರು.