ಸಿರುಗುಪ್ಪ: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ 2ನೇ ದಿನಕ್ಕೆ ಮುಂದುವರೆದ ಮುಷ್ಕರ.
ಗ್ರಾಮದ ಆಡಳಿತಾಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು 3-10-2024 ರಂದು ಮುಷ್ಕರ ರಾಜ್ಯ ವ್ಯಾಪ್ತಿ ಮುಷ್ಕರ ಹಿಂಪಡೆಯಲಾಯಿತ್ತು ಇದರೆ ಇಲ್ಲಿಯವರಿಗೂ ಯಾವುದೇ ಬೇಡಿಕೆ ಈಡೇರಿಸದೆ ಇರುವುದರಿಂದ ರಾಜ್ಯಾದ್ಯಂತ ಮುಷ್ಕರ ಕೈಗೊಳ್ಳಲಾಗಿದೆ.
ಗ್ರಾಮ ಆಡಳಿತಾಧಿಕಾರಿಗಳ ಕರ್ತವ್ಯ ನಿರ್ವಹಿಸುವಾಗ ಜೀವಹಾನಿ ಆಗುವ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು,ಪ್ರಯಾಣ ಭತ್ಯೆ 500ರೂ ರಿಂದ 5000ಸಾವಿರ ರೂಪಾಯಿ ವರೆಗೆ ಹೆಚ್ಚಳ ಮಾಡಬೇಕು,ಬೆಳೆ ಸಮೀಕ್ಷೆ ಹಾಗೂ ಬೆಳೆ ಹಾನಿ ಪರಿಹಾರ ಕೆಲಸವನ್ನು ಕೃಷಿ ಅಥವಾ ತೋಟಗಾರಿಕೆ ಇಲಾಖೆಗೆ ನಿರ್ವಹಿಸುವಂತೆ ಆದೇಶಿಸುವಂತೆ,ಮ್ಯುಟೇಷನ್ ಅವಧಿ ವಿಸ್ತರಣೆ ಮಾಡಬೇಕು,ಪ್ರೋಟೋ ಕಾಲ ಕೆಲಸದಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೈಬಿಡಬೇಕು ,ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆಯನ್ನು ಒದಗಿಸುವ ವಿಚಾರ ನೌಕರರ ಬಹುವರ್ಷದ ಬೇಡಿಕೆಯನ್ನು ಆದ್ಯತೆಯಾಗಿ ಪರಿಗಣಿಸಿ ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ಗ್ರಾಮ ಆಡಳಿತಧಿಕಾರಿಗಳ ಮುಷ್ಕರ ಕಚೇರಿ ಬಿಕೋ ಬಿಕೋ: ರಾಜ್ಯಾದ್ಯಂತ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಕೈಗೊಳ್ಳಲಾಗಿದೆ ಕಚೇರಿ ಬಂದ್ ಮಾಡಿಕೊಂಡು ಪ್ರತಿಭಟನೆ ಮಾಡುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಗೆ ಬರುವ ಸಾರ್ವಜನಿಕರು ತಮ್ಮ ಮೋಟೇಷನ್ ಕಾಫಿ, ಜಾತಿ ಮತ್ತು ಅದಾಯ ಪ್ರಮಾಣ ಪತ್ರ,ವಂಶವೃಕ್ಷ,ಪಹಣೆ ದಾಖಲೆ ಪತ್ರಗಳು ತೆಗೆದುಕೊಳ್ಳಲು ಬರುವ ಸಾರ್ವಜನಿಕರು ಕಛೇರಿಯಲ್ಲಿ ಅಧಿಕಾರಿಗಳು ಇಲ್ಲದೆ ಕಛೇರಿಯಲ್ಲಿ ಖಾಲಿ ಖಾಲಿ ಚೇರ್ ಗಳು ಕಾಣಿಸುತ್ತಿರುವುದು ಇನ್ನೂ ಕೆಲವರು ಕಛೇರಿಮ ಬಳಿ ಅಧಿಕಾರಿಗಳ ಬರುವಿಕೆಗಾಗಿ ಕಾದು ಕುಳಿತಿದ್ದಾರೆ ಪ್ರತಿ ನಿತ್ಯ ಜನಜಂಗುಳಿ ಇರುವ ಗ್ರಾಮ ಆಡಳಿತ ಕಛೇರಿ ಕಳೆದ ಎರಡು ದಿನಗಳಿಂದ ಕಛೇರಿ ಸಂಪೂರ್ಣ ಬಿಕೋ ಎನ್ನುತಿದೆ.