Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

‘ಕೈ’ ಕಮಾಂಡ್‌ ಅಂಗಳಕ್ಕೆ ಜಾತಿಗಣತಿ - ಇನ್ನಾದರೂ ಅಂತ್ಯವಾಗುತ್ತಾ ವಿವಾದ?

ಬೆಂಗಳೂರು: ಜಾತಿ ಗಣತಿ ಕುರಿತು ಸಂಪುಟ ಸಭೆಯಲ್ಲಾದ ಬೆಳವಣಿಗೆಯ ಇಂಚಿಂಚು ಮಾಹಿತಿಯೀಗ ಕಾಂಗ್ರೆಸ್‌ ಹೈಕಮಾಂಡ್‌ಗೆ ತಲುಪಿದೆ. ಹಾಗೆಯೇ ಎಐಸಿಸಿ ಮೂಲಕವೇ ನಿರ್ಣಾಯಕ ಸಂದೇಶ ಕೊಡಿಸಿ ಜಾತಿ ಗಣತಿಗೆ ತಾರ್ಕಿಕ ಅಂತ್ಯ ಹಾಡುವ ಬಗ್ಗೆ ಗಂಭೀರ ಯತ್ನ ಪ್ರಾರಂಭವಾಗಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ(ಜಾತಿ ಗಣತಿ) ವರದಿಯನ್ನು ಸಂಪುಟ ಸಭೆಯಲ್ಲಿಮಂಡಿಸುವ ಬಗ್ಗೆ ಲೋಕಸಭೆ ಪ್ರತಿಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚಿಸಿದ್ದರು. ರಾಹುಲ್‌ ಗ್ರೀನ್‌ ಸಿಗ್ನಲ್‌ ಕೊಟ್ಟ ಬಳಿಕವೇ ಈ ವರದಿಯನ್ನು ಸಂಪುಟ ಸಭೆಗೆ ತರುವ ಯತ್ನಕ್ಕೆ ಬಲ ಸಿಕ್ಕಿತ್ತು.

ಜಾತಿ ಗಣತಿ ವರದಿಗೆ ಪ್ರಬಲ ಸಮುದಾಯಗಳ ವಿರೋಧ ಆರಂಭದಿಂದಲೂ ಇದೆ. ಈ ನಡುವೆಯೂ ಹೈಕಮಾಂಡ್‌ ಆದೇಶದ ಹಿನ್ನೆಲೆಯಲ್ಲಿವರದಿ ಸ್ವೀಕಾರ ಪ್ರಕ್ರಿಯೆಯ ದಾರಿ ಸರಳವಾಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಪ್ರಬಲ ಜಾತಿ ಸಂಘಟನೆಗಳ ಬಿಗಿಪಟ್ಟು ಮತ್ತು ಸಂಪುಟ ಸಭೆಯಲ್ಲೂಅದು ಪ್ರತಿಧ್ವನಿಸಿದ್ದರಿಂದ ಜಾತಿ ಗಣತಿ ಕುರಿತ ಚರ್ಚೆಯೇ ಅಪೂರ್ಣಗೊಂಡಿದೆ.

ಈ ವಿದ್ಯಮಾನದ ಬಗ್ಗೆ ಮುಖ್ಯಮಂತ್ರಿಯವರು ಹೈಕಮಾಂಡ್‌ಗೆ ಮಾಹಿತಿ ರವಾನಿಸಿದ್ದಾರೆ. ಈ ವರದಿ ವಿಷಯದಲ್ಲಿಸರಕಾರವೂ ಆತುರದ ಕ್ರಮಕ್ಕೆ ಮುಂದಾಗಿಲ್ಲ. ಎಲ್ಲಜಾತಿ, ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿಏಪ್ರಿಲ್‌ 11ರಂದು ನಡೆದ ಸಂಪುಟ ಸಭೆಯಲ್ಲಿವರದಿ ಮಂಡಿಸಲಾಗಿತ್ತು. ಬಳಿಕ ಅಧ್ಯಯನ ಕೈಗೊಳ್ಳಲು ವರದಿಯ ಸಾರಾಂಶದ ಪ್ರತಿಯನ್ನು ಸಂಪುಟದ ಎಲ್ಲಸದಸ್ಯರಿಗೆ ಕಳುಹಿಸಿ ಕೊಡಲಾಗಿತ್ತು. ಅದರ ಅನುಸಾರ ಏಪ್ರಿಲ್‌ 17ರಂದು ಗುರುವಾರ ನಡೆದ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿಚರ್ಚೆ ಪ್ರಾರಂಭಿಸಲಾಯಿತು. ನಂತರ ಮೇ 2ರಂದು ಪುನಃ ಸಭೆ ಸೇರಿ ಚರ್ಚಿಸುವ ನಿರ್ಧಾರಕ್ಕೆ ಬರಲಾಗಿದೆ ಎಂಬ ವಿವರವನ್ನು ಹೈಕಮಾಂಡ್‌ಗೆ ಕಳುಹಿಸಿ ಕೊಡಲಾಗಿದೆ ಎಂದು ಗೊತ್ತಾಗಿದೆ

ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸಚಿವರುಗಳು ಜಾತಿ ಗಣತಿಗೆ ಆಕ್ಷೇಪಿಸಿ ಸಂಪುಟದಲ್ಲಿಧ್ವನಿ ಎತ್ತಿದ್ದರು. ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಸಮಾಜದಿಂದ ಬಂದಿರುವ ಸಚಿವರುಗಳು ವರದಿ ಪರ ವಹಿಸಿದ್ದರು. ತಟಸ್ಥ ನಿಲುವು ತಳೆದವರೂ ಇದ್ದರು. ಈ ಎಲ್ಲಅಂಶಗಳ ಬಗ್ಗೆಯೂ ಹೈಕಮಾಂಡ್‌ಗೆ ವಿಸ್ತೃತವಾದ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

‘‘ಜಾತಿ ಗಣತಿ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲೇ ಪ್ರಸ್ತಾಪಿಸಲಾಗಿದೆ. ಹಾಗಾಗಿ ನುಡಿದಂತೆ ನಡೆದುಕೊಳ್ಳಬೇಕು. ಸಾಮಾಜಿಕ ನ್ಯಾಯ ಪರಿಪಾಲನೆಗೆ ಕೊಟ್ಟಿರುವ ಈ ಭರವಸೆ ಈಡೇರಿಸದಿದ್ದರೆ ತಪ್ಪಾಗುತ್ತದೆ,’’ ಎಂದು ಸಂಪುಟ ಸಭೆಯಲ್ಲಿಮುಖ್ಯಮಂತ್ರಿಯವರು ಕಿವಿಮಾತು ಹೇಳಿದ್ದರು ಎಂದು ವರದಿಯಾಗಿತ್ತು. ಇದಲ್ಲದೆ ರಾಷ್ಟ್ರೀಯ ಮಟ್ಟದಲ್ಲೂಜಾತಿ ಗಣತಿ ಬಗ್ಗೆ ಎಐಸಿಸಿ ಪ್ರತಿಪಾದಿಸುತ್ತಿದೆ. ರಾಹುಲ್‌ ಗಾಂಧಿ ಅವರನ್ನು ಒಳಗೊಂಡಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಜಾತಿ ಗಣತಿ ಪರವಾಗಿ ಕಾಂಗ್ರೆಸ್‌ ಇದೆ ಎಂಬ ನಿಲುವನ್ನು ಹಲವು ಬಾರಿ ಪ್ರಕಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿರಾಜ್ಯ ಸಂಪುಟ ಸಭೆಯಲ್ಲಿಚರ್ಚಿಸಿದ ವಿಚಾರಗಳು ಹಾಗೂ ಜಾತಿ ಗಣತಿ ಕುರಿತಾದ ಪರ, ವಿರೋಧ ಅಭಿಪ್ರಾಯಗಳ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಹೈಕಮಾಂಡ್ರೂಲಿಂಗ್‌ ?

ಜಾತಿ ಗಣತಿಯ ಪರವಾಗಿ ಕಾಂಗ್ರೆಸ್‌ ಹೈಕಮಾಂಡ್‌ ನಿಂತಿದ್ದರೂ ರಾಜ್ಯದಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ಹಾಗಾಗಿ ಈ ವರದಿಯ ಪರ ನಿಲ್ಲುವಂತೆ ತನ್ನೆಲ್ಲನಾಯಕರಿಗೆ ಸೂಚನೆ ನೀಡುತ್ತದೋ ಅಥವಾ ಇನ್ನಷ್ಟು ಚರ್ಚೆ, ಪರಾಮರ್ಶೆಯಾಗಲಿ ಎಂದು ಕಾಯ್ದು ನೋಡುತ್ತದೋ ಎಂಬ ಕುತೂಹಲವಿದೆ.

ಲಿಂಗಾಯತ, ಒಕ್ಕಲಿಗರಿಂದಲೂ ಸಂಪರ್ಕ :

ಕೆಲ ತಿಂಗಳ ಹಿಂದೆಯೇ ಜಾತಿ ಗಣತಿ ವರದಿಯನ್ನು ಸಂಪುಟಕ್ಕೆ ತರಲು ತಯಾರಿ ಮಾಡಿಕೊಂಡಿದ್ದರೂ ಕಡೆ ಕ್ಷಣದಲ್ಲಿಹಿಂದೆ ಸರಿಯಲಾಗಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ ಮೂಲಕ ತಡೆ ಕೊಡಿಸಿದ್ದರಿಂದ ಈ ವಿಚಾರವನ್ನು ಆಗ ಮುಂದೂಡಲಾಗಿತ್ತು ಎಂಬ ಮಾತು ಕೇಳಿ ಬಂದಿತ್ತು. ಈಗಲೂ ಡಿ.ಕೆ.ಶಿವಕುಮಾರ್‌ ಆದಿಯಾಗಿ ಪ್ರಬಲ ಸಮುದಾಯದ ಸಚಿವರುಗಳೂ ಹೈಕಮಾಂಡ್‌ಗೆ ಒತ್ತಡ ತರುವ ಆಯ್ಕೆಯನ್ನು ಮುಕ್ತವಾಗಿಟ್ಟುಕೊಂಡಿದ್ದಾರೆ ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು.

ಹಾಗಾಗಿ ಜಾತಿ ಗಣತಿಗೆ ವಿರೋಧ ಮಾಡುತ್ತಿರುವವರೂ ಹೈಕಮಾಂಡ್‌ ಸಂಪರ್ಕಿಸುವುದು ನಿಚ್ಚಳ. ಮತ್ತೊಂದೆಡೆ ಲಿಂಗಾಯತ ಸಮಾಜದ ಸಚಿವರುಗಳು ಸಭೆ ಸೇರಿ ಯಾವುದೇ ಕಾರಣಕ್ಕೂ ಈ ವರದಿಯನ್ನು ಒಪ್ಪಬಾರದು ಎಂಬ ನಿರ್ಣಯ ಪಾಸು ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯಿದೆ.

 

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?