Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಗದಗ: ಮರಳು ಮಾಫಿಯಾಕ್ಕೆ ಇನ್ನೆಷ್ಟು ಬಲಿ ಬೇಕು?

ಗದಗ(ಫೆ.18): ಗದಗ ಭೌಗೋಳಿಕವಾಗಿ ಸಣ್ಣ ಜಿಲ್ಲೆಯಾದರೂ ಇಲ್ಲಿನ ನೈಸರ್ಗಿಕ ಸಂಪತ್ತು ಹೇರಳವಾಗಿದ್ದು, ಅದರಲ್ಲಿಯೂ ಗುಣಮಟ್ಟದ ಮರಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ವಿಶೇಷ ವಲಯವೆಂದು ಗುರುತಿಸಿಕೊಂಡಿದೆ. ಆದರೆ ಈ ನೈಸರ್ಗಿಕ ಸಂಪತ್ತನ್ನು ಹಗಲು ರಾತ್ರಿ ಎನ್ನದೇ ಲೂಟಿ ಮಾಡಿರುವ ಪ್ರಭಾವಿಗಳೇ ಜಿಲ್ಲೆಯಲ್ಲಿ ಕಳೆದ 10 ವರ್ಷದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದು, ಸದ್ಯ ಜಿಲ್ಲೆಯ ರಾಜಕೀಯವನ್ನು ಅವರೇ ನಿಯಂತ್ರಿಸುತ್ತಿದ್ದಾರೆ.

2 ನದಿಗಳು, 35 ಹಳ್ಳಗಳು:

ಜಿಲ್ಲೆಯ ಒಂದು ಭಾಗದಲ್ಲಿ ಮಲಪ್ರಭಾ ನದಿ, ಇನ್ನೊಂದು ಭಾಗದಲ್ಲಿ ತುಂಗಭದ್ರಾ ನದಿ ಹರಿಯುತ್ತಿದ್ದು, ಇದರೊಟ್ಟಿಗೆ 35 ಹಳ್ಳಗಳಿದ್ದು, ಎಲ್ಲಾ ಕಡೆಗಳಲ್ಲಿಯೂ ಅತ್ಯುತ್ತಮ ಮರಳು ಹೇರಳವಾಗಿ ಸಿಗುತ್ತಿದೆ. 2013 ಕ್ಕಿಂತಲೂ ಮೊದಲು ಮರಳು ದಂಧೆಯನ್ನು ಕೆಲವರು ದೂರದ ಆಂಧ್ರದಿಂದ ಬಂದು ಅಲ್ಪ ಪ್ರಮಾಣದಲ್ಲಿ ಸಾಗಾಟ ನಡೆಸುತ್ತಿದ್ದರು. ನಂತರ ಇದಕ್ಕೆ ರಾಜಕೀಯ ಪಕ್ಷಗಳ 2ನೇ ದರ್ಜೆಯ ನಾಯಕರು, ಶಾಸಕರು, ಸಚಿವರುಗಳ ಹಿಂಬಾಲಕರು, ಹಣ ಉಳ್ಳವರು ಇಳಿದರೋ ಅಲ್ಲಿಗೆ ಮರಳು ಎನ್ನುವುದು ಜಿಲ್ಲೆಯ ರಾಜಕೀಯ ನಿರ್ಧರಿಸುವ ಪ್ರಮುಖ ವಸ್ತುವಾಗಿ ಮಾರ್ಪಟ್ಟಿತು.

ಹಿಂಬಾಲಕರದ್ದೇ ದರ್ಬಾರ್‌:

ಮರಳು ದಂಧೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅವರ ಹಿಂಬಾಲಕರಿಗೆ, ಕಾಂಗ್ರೆಸ್ ಬಂದಾಗ ಅವರ ಹಿಂಬಾಲಕರಿಗೆ ಉಸ್ತುವಾರಿ ನೋಡಿಕೊಳ್ಳುವ ಅಲಿಖಿತ ವ್ಯವಸ್ಥೆ ಜಿಲ್ಲೆಯಲ್ಲಿ ಜಾರಿಯಲ್ಲಿದೆ. ನಿತ್ಯವೂ ಕೋಟ್ಯಂತರ ವಹಿವಾಟು ನಡೆಸುವ ಈ ಮರಳು ಮಾಫಿಯಾ ನಿಯಂತ್ರಿಸಲು ಪ್ರಭಾವಿಗಳು ಹಗಲು ರಾತ್ರಿ ಎನ್ನದೇ ಪ್ರಯತ್ನಿಸುತ್ತಲೇ ಇರುತ್ತಾರೆ. ಅಧಿಕಾರ ಇದ್ದವರು ಸಹಜವಾಗಿ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರೆ. ಸೋತವರು ಹಿಂದೆ ನಿಂತು ಇದನ್ನೇ ಮಾಡುತ್ತಿದ್ದಾರೆ.

ರೋಣ ಪ್ರಕರಣ ಜ್ವಲಂತ ಉದಾಹರಣೆ

ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ವೈದ್ಯ ಡಾ. ಶಶಿಧರ ಹಟ್ಟಿ ಕಾಂಗ್ರೆಸ್‌ನಲ್ಲಿ ಪ್ರಭಾವಿ ವ್ಯಕ್ತಿ, ಪ್ರಭಾವಿ ಸಮುದಾಯದಿಂದ ಬಂದವರಾಗಿದ್ದರು. ಫೆ. 12ರಂದು ಅವರು ಇದೇ ಮರಳು ಮಾಫಿಯಾದ ಹಣಕಾಸಿನ ವಹಿವಾಟಿನ ವಿಷಯವಾಗಿ ಅವರದೇ (ಕಾಂಗ್ರೆಸ್) ಪಕ್ಷದ ಸರ್ಜಾಪುರದ ಶರಣಗೌಡ ಪಾಟೀಲ್‌ ಹೆಸರು ಬರೆದಿಟ್ಟು (ಡೆತ್ ನೋಟ್) ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇದುವರೆಗೂ ಆರೋಪಿ ಶರಣಗೌಡನ ಬಂಧನವಾಗಿಲ್ಲ. ಇದು ಮರಳು ದಂಧೆ ನಡೆಸುವವರು ಭಾರೀ ಪ್ರಭಾವ ಹೊಂದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಮರಳು ಮಾರಾಟ ಮತ್ತು ವಹಿವಾಟು ಎಷ್ಟು ಪ್ರಭಾವಿತವಾಗಿದೆ ಎಂದರೆ ಅವರು ಏನು ಬೇಕಾದರೂ, ಯಾರನ್ನು ಬೇಕಾದರೂ ಖರೀದಿಸುತ್ತಾರೆ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿದೆ.

2017ರ ಫೆ. 5ರಂದು ಮರಳು ಸಾಗಾಟ ಮಾಡುವವರು, ಮರಳು ಮಾಫಿಯಾ ನಿಯಂತ್ರಿಸುವವರು ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ನುಗ್ಗಿ ಠಾಣೆಯನ್ನೇ ಸುಟ್ಟು ಹಾಕಿದ್ದರು. ಜೀಪುಗಳು, ಸಾಮಗ್ರಿ, ದಾಖಲೆಗಳು ಬೆಂಕಿಗೆ ಆಹುತಿಯಾಗಿದ್ದವು. ಇದು ದಾಖಲಾಗಿರುವ ಪ್ರಕರಣ ಮಾತ್ರ, ದಾಖಲಾಗದೇ ರಾಜಕೀಯ ಪ್ರಭಾವದಿಂದ ಮುಚ್ಚಿ ಹೋಗಿರುವ ಸಾವಿರಾರು ಪ್ರಕರಣಗಳಿವೆ. ಮುಚ್ಚಿ ಹೋಗಿರುವ ಪ್ರತಿಯೊಂದು ಪ್ರಕರಣದ ಹಿಂದೆಯೂ ರಾಜಕೀಯ ಕೈವಾಡವಿದೆ. ಅಮಾಯಕ ಜೀವಗಳು ಬಲಿಯಾಗಿವೆ. ಅವರ ಸಂಬಂಧಿಗಳು ನೋವನ್ನು ಸಹಿಸಲಾಗದೇ, ಹೊರಗಡೆಯೂ ಹೇಳಲಾಗದೇ ಇಂದಿಗೂ ಬೆಂದ ಜೀವದಂತೆ ಬದುಕುತ್ತಿವೆ.

ವ್ಯಾಪಕ ಹಸ್ತಕ್ಷೇಪ

ಚಿನ್ನದ ಮೊಟ್ಟೆ ಇಡುವ ಕೋಳಿಯಂತಿರುವ ಮರಳು ದಂಧೆಯನ್ನು ಪ್ರಭಾವಿಗಳೇ ಮುಂದೆ ನಿಂತು ನಡೆಸುತ್ತಾರೆ. ಅವರ ಹಿಂಬಾಲಕರಿಗೆ ಸೂಚನೆ ಕೊಟ್ಟು ಆ ಮೂಲಕ ಹಣ ಗಳಿಸುತ್ತಾರೆ. ಇದನ್ನು ಪ್ರಶ್ನೆ ಮಾಡುವ ನೈತಿಕತೆ ವಿರೋಧ ಪಕ್ಷಗಳಿಗೂ ಇಲ್ಲ. ಕಾರಣ ಅವರ ಸರ್ಕಾರ ಇದ್ದಾಗ ಅವರೂ ಈ ಅಕ್ರಮವನ್ನು ವ್ಯಾಪಕವಾಗಿ ನಡೆಸಿದ್ದಾರೆ. ಮರಳು ಸಾಗಾಟ ಮಾಡುವ ಶೇ. 90 ಲಾರಿಗಳು ಕೂಡಾ ರಾಜಕೀಯ ನಾಯಕರ ಹಿಂಬಾಲಕರಿಗೇ ಸೇರಿವೆ. ಅದಕ್ಕಾಗಿ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹೀಗೆ ಪ್ರತಿಯೊಂದು ಇಲಾಖೆಯಲ್ಲಿಯೂ ವ್ಯಾಪಕ ರಾಜಕೀಯ ಪ್ರಭಾವ, ಹಸ್ತಕ್ಷೇಪ ನಡೆಯುತ್ತಿದೆ.

ಚಿನ್ನದ ಮೊಟ್ಟೆ ಇಡುವ ಕೋಳಿಯಂತಿರುವ ಮರಳು ದಂಧೆಯನ್ನು ಪ್ರಭಾವಿಗಳೇ ಮುಂದೆ ನಿಂತು ನಡೆಸುತ್ತಾರೆ. ಅವರ ಹಿಂಬಾಲಕರಿಗೆ ಸೂಚನೆ ಕೊಟ್ಟು ಆ ಮೂಲಕ ಹಣ ಗಳಿಸುತ್ತಾರೆ. ಇದನ್ನು ಪ್ರಶ್ನೆ ಮಾಡುವ ನೈತಿಕತೆ ವಿರೋಧ ಪಕ್ಷಗಳಿಗೂ ಇಲ್ಲ. ಕಾರಣ ಅವರ ಸರ್ಕಾರ ಇದ್ದಾಗ ಅವರೂ ಈ ಅಕ್ರಮವನ್ನು ವ್ಯಾಪಕವಾಗಿ ನಡೆಸಿದ್ದಾರೆ.

 

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?