Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಕುರ್ಚಿ ಕಿತ್ತಾಟದಲ್ಲಿ ನಿರತರಾದ ಹಿರಿಯ ಅಧಿಕಾರಿಗಳು, ನಿಂತ ನೀರಾದ ಶಿಕ್ಷಣ ಇಲಾಖೆ ಕೆಲಸಕಾರ್ಯಗಳು!

ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಹುದ್ದೆಗೆ ಇಬ್ಬರು ಆಧಿಕಾರಿಗಳ ನಡುವೆ ಹಗ್ಗಜಗ್ಗಾಟ ನಡೆದಿದೆ. ಇಲಾಖೆಯ ಆಧಿಕಾರಿಗಳು ಸಿಬ್ಬಂದಿ ಕುರ್ಚಿ ಕಿತ್ತಾಟದಲ್ಲಿ ನಿರತರಾಗಿದ್ದಾರೆ. ಇಲಾಖೆಯ ಕೆಲಸ ಕಾರ್ಯಗಳು ನಿಂತನೀರಾಗಿದೆ.

ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ( education department) ಉಪ ನಿರ್ದೇಶಕರ ಹುದ್ದೆಗೆ (Vijayapura DDPI ) ಇಬ್ಬರು ಆಧಿಕಾರಿಗಳ ನಡುವೆ ಹಗ್ಗಜಗ್ಗಾಟ (fight) ನಡೆದಿದೆ. ಎನ್ ಎಚ್ ನಾಗೂರು ಹಾಗೂ ಉಮಾದೇವಿ ಸೊನ್ನವರ ಮಧ್ಯೆ ಡಿಡಿಪಿಐ ಕುರ್ಚಿಗಾಗಿ ಈ ಜಗ್ಗಾಟ ನಡೆದಿದೆ. 2009-10, 2011-12ನೇ ಸಾಲಿನಲ್ಲಿ ಸರ್ಕಾರದ ಐಇಡಿಎಸ್ಎಸ್ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಈ ಅಧಿಕಾರಿಗಳು ಅಸ್ತಿತ್ವದಲ್ಲೇ ಇಲ್ಲದ 18 ಸರ್ಕಾರೇತರ ಸಂಸ್ಥೆಗಳಿಗೆ ಶಿಫಾರಸು ಮಾಡಿರುವ ಹಾಗೂ ಅನುದಾನ ಬಿಡುಗಡೆ ಮಾಡಿ, ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪವಿದೆ.

ಅದರಂತೆ, ವಿಜಯಪುರ ಜಿಲ್ಲೆಯ ಉಪ ನಿರ್ದೇಶಕರಾಗಿದ್ದ ಬಸವನಬಾಗೇವಾಡಿ ಹಿಂದಿನ ಬಿಇಒ ಆಗಿದ್ದ ಎನ್ ಎಚ್ ನಾಗೂರ, ಇಂಡಿ ಬಿಇಒ ಆಗಿದ್ದ ಹಾಲಿ ವಿಜಯಪುರ ಡೈಟ್ ಹಿರಿಯ ಉಪನ್ಯಾಸಕ ಎ ಎಚ್ ಹತ್ತಳ್ಳಿ, ಸಿಂದಗಿ ಬಿಇಒ ಆಗಿದ್ದ ವಿಜಯಪುರ ಡೈಟ್ ಹಾಲಿ ಉಪನ್ಯಾಸಕ ಎಸ್ ಎ ಮುಜಾವರ ಎಂಬ ಮೂವರು ಆಧಿಕಾರಿಗಳನ್ನು ಕಳೆದ ಜನವರಿ 30 ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಇಲಾಖೆ ಹಿರಿಯ ಅಧಿಕಾರಿಗಳ ಶಿಫಾರಸು ಆಧರಿಸಿ ಅಮಾನತ್ತು ಮಾಡಿ ಆದೇಶ ಜಾರಿ ಮಾಡಿದ್ದರು.

ಬಳಿಕ ಫೆಬ್ರವರಿ 2 ರಂದು ವಿಜಯಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೈಟ್ ಪ್ರಾಚಾರ್ಯೆ ಉಮಾದೇವಿ ಸೊನ್ನವರ ಅವರನ್ನು ಪ್ರಭಾರಿ ಉಪ ನಿರ್ದೇಶಕರಾಗಿ ನಿಯೋಜಿಸಿ ಆದೇಶ ಮಾಡಿದ್ದರು. ಇಷ್ಟರ ಮದ್ಯೆ ತಮ್ಮ ಅಮಾನತ್ತು ಆದೇಶ ಪ್ರಶ್ನೆ ಮಾಡಿ ಎನ್ ಎಚ್ ನಾಗೂರು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಕಲಬುರಗಿ ಪೀಠದ ಮೋರೆ ಹೋಗಿದ್ದರು. ಕೆಎಟಿ ಕಲಬುರಗಿ ಪೀಠ ಎನ್ ಎಚ್ ನಾಗೂರು ಅಮಾನತ್ತು ಆದೇಶಕ್ಕೆ ಕಳೆದ ಫೆಬ್ರವರಿ 7 ರಂದು ತಡೆಯಾಜ್ಞೆ ನೀಡಿದೆ. ಅಮಾನತ್ತಿಗೆ ತಡೆಯಾಜ್ಞೆ ಕೆಎಟಿಯಿಂದ ಸಿಕ್ಕ ಕಾರಣ ಇಂದು ಎನ್ ಎಚ್ ನಾಗೂರು ನಾನೇ ಆಧಿಕೃತ ಡಿಡಿಪಿಐ ಎಂದು ಕಚೇರಿಗೆ ಆಗಮಿಸಿ ಡಿಡಿಪಿಐ ಕುರ್ಚಿಯಲ್ಲಿ ಅಸೀನರಾಗಿದ್ದಾರೆ.

ಇತ್ತ ಉಮಾದೇವಿ ಅವರೂ ಕಚೇರಿಗೆ ಆಗಮಿಸಿ ಕುಳಿತಿದ್ದಾರೆ. ಇಲಾಖೆಯ ಆಧಿಕಾರಿಗಳು ನನ್ನ ಬಳಿಯೇ ಕಡತಗಳಿಗೆ ಸಹಿ ಹಾಕಿಸಿಕೊಳ್ಳಬೇಕೆಂದು ಉಭಯ ಆಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರಿಂದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗೊಂದಲಕ್ಕೆ ಈಡಾಗಿದ್ದಾರೆ. ನಾವು ಯಾರ ಬಳಿ ಕಡತಗಳಿಗೆ ಸಹಿ ಹಾಕಿಸಿಕೊಳ್ಳಬೇಕೆಂದು ಗೊಂದಲಕ್ಕೆ ಬಿದ್ದಿದ್ದಾರೆ. ಈ ಕುರಿತು ಎನ್ ಎಚ್ ನಾಗೂರು ನಾನೇ ಅಧಿಕೃತ ಡಿಡಿಪಿಐ ಎಂದಿದ್ದಾರೆ. ನಾನು ಅಮಾನತ್ತು ಅದೇಶಕ್ಕೆ ತಡೆ ತಂದಿದ್ದೇನೆ. ನಾನು ಮೊದಲಿದ್ದ ಜಾಗದಲ್ಲೇ ಮುಂದುವರೆಯುತ್ತೇನೆ. ಸರ್ಕಾರ ನನಗೆ ಬದಲಿ ಸ್ಥಾನ ಬದಲಿ ಸ್ಥಳ ನಿಯೋಜನೆ ಮಾಡಿದರೆ ನಾನು ಹೋಗುತ್ತೇನೆ. ಈಗಾ ನಾನು ನನ್ನ ಅಮಾನತ್ತು ಆದೇಶಕ್ಕೆ ಕೆಎಟಿ ಕಲಬುರಗಿ ಪೀಠದಿಂದ ತಡೆ ತಂದಿದ್ದೇನೆ, ನಾನೇ ಆಧಿಕೃತ ಡಿಡಿಪಿಐ ಎಂದಿದ್ಧಾರೆ.

ಇತ್ತ ಪ್ರಭಾರಿ ಡಿಡಿಪಿಐ ಉಮಾದೇವಿ ಅವರು ಜಿಪಂ ಸಿಇಓ ಅವರ ಆದೇಶದಂತೆ ನಾನು ಡಿಡಿಪಿಐ ಆಗಿ ಸೇವೆ ಹಾಜರಾಗಿದ್ದೇನೆ. ಇಲ್ಲಿಂದ ಜಿಪಂ ಸಿಇಓ ಅವರು ಬಿಡುಗಡೆ ಮಾಡಿದರೆ ನಾನೂ ಹೋಗುತ್ತೇನೆ. ಅಲ್ಲಿಯವರೆಗೆ ನಾನೇ ಡಿಡಿಪಿಐ ಎಂದಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಆಧಿಕಾರಿಗಳು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾಯ್ದು ನೋಡಬೇಕಿದೆ.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?